20 ವರ್ಷದಿಂದ ನೆನೆಗುದಿಗೆ ಬಿದ್ದ ಹೆಜೆಲಾ -ಚಾಮರಾಜನಗರ ರೈಲು ಮಾರ್ಗದ ಬಗ್ಗೆ ಸದನದ ಗಮನ ಸೆಳೆದ ಸಂಸದೆ ಸುಮಲತಾ
ಹೆಜೆಲಾ - ಚಾಮರಾಜನಗರ ರೈಲು ಮಾರ್ಗದ ಬಗ್ಗೆ ಲೋಕಸಭಾ ಕಲಾಪದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಎರಡೂವರೆ ದಶಕಗಳ ಹಿಂದೆ ರೈಲ್ವೇ ಬಜೆಟ್ನಲ್ಲಿ ಘೋಷಣೆಯಾಗಿತ್ತು. ಆದರೆ, ಇನ್ನೂ ಕಾರ್ಯಾರಂಭ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ನಿಮ್ಮ ಪಕ್ಷವೇ(ಬಿಜೆಪಿ) ಆಡಳಿತ ನಡೆಸುತ್ತಿದೆ. ಆದ ಕಾರಣ ಸಹಕಾರದ ಸಮಸ್ಯೆ ಬರುವುದಿಲ್ಲ. ಈ ಯೋಜನೆ ನಾಲ್ಕು ಜಿಲ್ಲೆಗಳಿಗೆ ಸಹಾಯವಾಗುವ ಕಾರಣ ದಯಮಾಡಿ ಇದರೆಡೆಗೆ ಗಮನ ಹರಿಸಿ ಎಂದು ಮನವಿ ಮಾಡಿದರು.
Last Updated : Mar 16, 2021, 2:34 PM IST