ಕರ್ನಾಟಕ

karnataka

ಉತ್ತರಾಖಂಡ್​ನ ಚಮೋಲಿಯಲ್ಲಿ ಭಾರಿ ಹಿಮಪಾತ: ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್​

By

Published : Apr 23, 2021, 6:47 PM IST

ಚಮೋಲಿ: ಚಮೋಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಮತ್ತು ಹಿಮಪಾತ ಮುಂದುವರಿದಿದೆ. ಚಮೋಲಿಯ ಬದ್ರಿನಾಥ್ ಧಾಮ್, ಮನ, ಹೆಮಕುಂಡ್ ಸಾಹಿಬ್ ಚೋಪ್ತಾ ಸೇರಿದಂತೆ ಘಂಗಾರಿಯಾದಲ್ಲಿ ಹಿಮಪಾತ ಮುಂದುವರಿದಿದೆ. ತಗ್ಗು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ತಾಪಮಾನದಲ್ಲಿ ಭಾರಿ ಕುಸಿತ ದಾಖಲಾಗಿದೆ. ಮಳೆ ಮತ್ತು ತೀವ್ರ ಶೀತದ ಮಧ್ಯೆ ಜನರು ಮನೆಗಳಿಂದ ಹೊರಬರಲಾಗುತ್ತಿಲ್ಲ. ಭಾರತ-ಚೀನಾ ಗಡಿಯಲ್ಲಿರುವ ಕೊನೆಯ ಹಳ್ಳಿಯಾದ ಮನದಲ್ಲಿ ಹಿಮಪಾತ ಮುಂದುವರಿದಿದ್ದು, ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಸಹ ಮುಚ್ಚಲಾಗಿದೆ.

ABOUT THE AUTHOR

...view details