ಕೆಳಗಿಳಿಯುತ್ತಲೇ ರೈಲಿಗೆ ಸಿಲುಕಿದ ಪ್ರಯಾಣಿಕ... ಮುಂದೇನಾಯ್ತು?
ನಾಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ಚಾರ್ಮಿನಾರ್ ಎಕ್ಸ್ಪ್ರೆಸ್ ರೈಲಿನಿಂದ ಇಳಿಯುತ್ತಿದ್ದ ಪ್ರಯಾಣಿಕ ರೈಲು ಮತ್ತು ಪ್ಲಾಟ್ಫಾರ್ಮ್ ಮಧ್ಯೆ ಸಿಕ್ಕಿಬಿದ್ದು, ಅದೃಷ್ಟವಶಾತ್ ಬದುಕುಳಿದಿದ್ದಾನೆ. ಈ ಅವಘಡ ಕಂಡ ರೈಲ್ವೆ ಕಾನ್ಸ್ಟೇಬಲ್ ವಿಕುಲ್ಕುಮಾರ್ ಎಂಬುವರು ಸಾಹಸದಿಂದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಆರ್ಪಿಎಫ್ ಐಜಿ ಈಶ್ವರ್ ಮತ್ತು ಆಯುಕ್ತ ರಾಮಕೃಷ್ಣ ಅವರು ವಿಕುಲ್ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.