ಕರ್ನಾಟಕ

karnataka

By

Published : Apr 13, 2020, 1:16 PM IST

ETV Bharat / state

ನ್ಯಾಯ ಬೆಲೆ ಅಂಗಡಿ ಅಕ್ರಮ ತಡೆಗೆ ಮುಂದಾದ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ..

ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದ ಕೆಂಚಪ್ಪ ಮತ್ತು ಶಿವಪ್ಪ ಎಂಬುವರ ಮೇಲೆ ಸೆಕ್ಷನ್ 353, 188, 504, 506, 34ರ ಅಡಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

attempted-assault-on-tahsildar
ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ

ಸುರಪುರ :ಪಡಿತರ ಅಂಗಡಿಗಳ ಅಕ್ರಮ ತಡೆಯಲು ಮುಂದಾದ ತಹಶೀಲ್ದಾರ್​​ ಮತ್ತು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಸಿರುವ ಘಟನೆ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಮತ್ತು ಆಹಾರ ನಿರೀಕ್ಷಕ ಅಂಬ್ರೇಶ್ ಕಲ್ಮನಿ ಹಾಗೂ ಅಪ್ಪಯ್ಯ ಹಿರೇಮಠ ಮೇಲೆ ಕೆಂಚಪ್ಪ ಮತ್ತು ಶಿವಪ್ಪ ಎಂಬುವರು ಹಲ್ಲೆಗೆ ಯತ್ನಿಸಿದ್ದಾರೆ. ಪಡಿತರ ಅಂಗಡಿಯಲ್ಲಿ ಜನರಿಗೆ ಮೋಸ ಮಾಡಿ ಪಡಿತರ ಹಂಚಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಅಂಗಡಿ ಮೇಲೆ ದಾಳಿಗೆ ಮುಂದಾದಾಗ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದ ಕೆಂಚಪ್ಪ ಮತ್ತು ಶಿವಪ್ಪ ಎಂಬುವರ ಮೇಲೆ ಸೆಕ್ಷನ್ 353, 188, 504, 506, 34ರ ಅಡಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details