ಕರ್ನಾಟಕ

karnataka

By

Published : Aug 14, 2020, 4:02 PM IST

ETV Bharat / state

ಭೀಮಾತೀರದಲ್ಲಿ ಮತ್ತೆ ಲಾಂಗು ಮಚ್ಚುಗಳ ಸದ್ದು; ಯುವಕನ ಅಟ್ಟಾಡಿಸಿ ಭೀಕರ ಕೊಲೆ

ಭೀಮಾತೀರದಲ್ಲಿ ದುಷ್ಕರ್ಮಿಗಳು ಮತ್ತೆ ಲಾಂಗು, ಮುಚ್ಚುಗಳನ್ನು ಝಳಪಿಸಿದ್ದಾರೆ. ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ.

You man murder in Vijayapura, You man murder in Bheema theera, Bheema theera murder, Bheema theera murder news, Vijayapura murder news, ವಿಜಯಪುರದಲ್ಲಿ ಯುವಕನ ಕೊಲೆ, ಭೀಮಾತೀರದಲ್ಲಿ ಯುವಕನ ಕೊಲೆ, ಭೀಮಾತೀರಾ ಕೊಲೆ, ಭೀಮಾತೀರಾ ಕೊಲೆ ಸುದ್ದಿ, ವಿಜಯಪುರ ಕೊಲೆ, ವಿಜಯಪುರ ಕೊಲೆ ಸುದ್ದಿ,
ವಿಜಯಪುರದಲ್ಲಿ ಯುವಕನ ಬರ್ಬರ ಕೊಲೆಯ ದೃಶ್ಯ

ವಿಜಯಪುರ: ಭೀಮಾತೀರದಲ್ಲಿ ಮತ್ತೆ ರಕ್ತದ ಕೋಡಿ ಹರಿದಿದೆ. ಗ್ರಾಮದಲ್ಲಿ ಅಟ್ಟಾಡಿಸಿಕೊಂಡು ಯುವಕನನ್ನು ಮಚ್ಚು,ಲಾಂಗ್​ಗಳಿಂದ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಪುರದಲ್ಲಿ ಯುವಕನ ಬರ್ಬರ ಕೊಲೆ

ಜಿಲ್ಲೆಯ ಚಡಚಣ ತಾಲೂಕಿನ ಜಿರಂಕಲಿ ಗ್ರಾಮದಲ್ಲಿ ದುಷ್ಕರ್ಮಿಗಳು 22 ವರ್ಷದ ಚಂದ್ರಕಾಂತ ಕಟ್ಟಿಮನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ.

ಈ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹಳೆ ದ್ವೇಷದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಕೊಲೆಯಾದ ಯುವಕ

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details