ಕರ್ನಾಟಕ

karnataka

By

Published : Jun 8, 2020, 6:34 PM IST

ETV Bharat / state

ವಿಜಯಪುರ: ಅಪಘಾತದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಎಎಸ್​​​ಪಿಗೆ ಅದ್ದೂರಿ ಸ್ವಾಗತ

ಕೊರೊನಾ ಸೇವೆಯಲ್ಲಿದ್ದ ವೇಳೆ ರಸ್ತೆ ಅಪಘಾತದಿಂದಾಗಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಎಎಸ್​​ಪಿ ಇದೀಗ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಹಿನ್ನೆಲೆ ಅವರನ್ನು ಜಿಲ್ಲೆಯ ಉನ್ನತ ಅಧಿಕಾರಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ.

Worm Welcome for ASP who recovered from the accident and attended duty
ಅಪಘಾತದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಎಎಸ್​​​ಪಿಗೆ ಅದ್ದೂರಿ ಸ್ವಾಗತ

ವಿಜಯಪುರ: ಕರ್ತವ್ಯದಲ್ಲಿದ್ದಾಗ ಗಾಯಗೊಂಡಿದ್ದ ಎಎಸ್​ಪಿ ರಾಮ ಅರಸಿದ್ಧಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ಇಂದು ಕರ್ತವ್ಯಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಿಲ್ಲೆಯ ಎಸ್​​​ಪಿ, ಡಿಸಿ ಹಾಗೂ ಸಿಇಒಗಳು ಖುದ್ದು ಹಾಜರಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಮೇ. 4ರಂದು ಕೊರೊನಾ ಕರ್ತವ್ಯದಲ್ಲಿದ್ದಾಗ ಬ್ಯಾರಿಕೇಡ್ ಸರಿಪಡಿಸುವ ಸಂದರ್ಭ ಹಿಂಬದಿಯಿಂದ ಬಂದ ಬೈಕ್ ಸವಾರ ಎಎಸ್​​ಪಿ ಅವರಿಗೆ ಡಿಕ್ಕಿ ಹೊಡೆದಿದ್ದ.

ಗಾಯಗೊಂಡು ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಡಾ. ರಾಮ ಅರಸಿದ್ಧಿ ಇಂದು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಭರ್ಜರಿ ಸ್ವಾಗತಕ್ಕೆ ಎಎಸ್​​​​ಪಿ ಡಾ. ರಾಮ ಅರಸಿದ್ಧಿ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ತಿಂಗಳ ಹಿಂದೆ ಎಎಸ್​​ಪಿ ಅರಸಿದ್ಧಿ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಸಾವನ್ನು ಗೆದ್ದು ಬಂದಿದ್ದಲ್ಲದೇ ತಕ್ಷಣ ಕರ್ತವ್ಯಕ್ಕೂ ಹಾಜರಾಗಿದ್ದಾರೆ. ಅವರ ಕಾರ್ಯಕ್ಷಮತೆ ಎಲ್ಲರಿಗೂ ಮಾದರಿಯಾಗಲಿ ಎಂದರು.

ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾದ ಎಎಸ್​ಪಿ ರಾಮ ಅರಸಿದ್ಧಿ ಮಾತನಾಡಿ, ಅಪಘಾತವಾದಾಗ ನನ್ನ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈಗ ವೈದ್ಯರ ಸತತ ಪರಿಶ್ರಮ, ಹಿರಿಯ ಅಧಿಕಾರಿಗಳ ಹಾರೈಕೆಯಿಂದ ಗುಣಮುಖನಾಗಿ ಕರ್ತವ್ಯಕ್ಕೆ ಹಾಜರಾಗಿದ್ದು ಖುಷಿ ತಂದಿದೆ ಎಂದರು.

ABOUT THE AUTHOR

...view details