ಕರ್ನಾಟಕ

karnataka

By

Published : Jun 30, 2020, 11:50 PM IST

Updated : Jul 1, 2020, 9:22 AM IST

ETV Bharat / state

399 ಸೋಂಕಿತರಿದ್ರೂ ರಾತ್ರಿ ಕರ್ಫ್ಯೂಗೆ ಕ್ಯಾರೆನ್ನುತ್ತಿಲ್ಲ ವಿಜಯಪುರದ ಮಂದಿ

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಜಿಲ್ಲಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರಿಗೂ ಕರ್ಫ್ಯೂ ಜಾರಿ ಮಾಡಿದ್ದಾರೆ.

vijayapura
ವಿಜಯಪುರ

ವಿಜಯಪುರ:ಕೊರೊನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ರು ಜನರು ಮಾತ್ರ ನಿಯಮ ಪಾಲಿಸುತ್ತಿಲ್ಲ.

ನಗರದಲ್ಲಿ ಕೋವಿಡ್ ವೈರಸ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಜಿಲ್ಲಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರಿಗೂ ಕರ್ಫ್ಯೂ ಜಾರಿ ಮಾಡಿದ್ದಾರೆ. ರಾತ್ರಿ ಗುಮ್ಮಟನಗರಿಯಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಆದರೆ ಜನರು ಮಾತ್ರ ನಮಗೂ ಜಿಲ್ಲಾಡಳಿತದ ನಿಯಮಕ್ಕೂ ಸಂಬಂಧವಿಲ್ಲದಂತೆ ಓಡಾಡುತ್ತಿದ್ದರು.

ಜಿಲ್ಲೆಯಲ್ಲಿ ಇಂದು ಒಂದೇ ದಿನ‌ 39 ಜನರಿಗೆ ಸೋಂಕು ತಗುಲಿದೆ. ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ 399 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ದಾರೆ.

Last Updated : Jul 1, 2020, 9:22 AM IST

ABOUT THE AUTHOR

...view details