ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನಕ್ಕೆ .. ಬಂಥನಾಳ ಶ್ರೀಗಳ ಕಾರು ಡಿಕ್ಕಿ

ಬಂಥನಾಳ ಶ್ರೀಗಳ ವಾಹನ ಮತ್ತು ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನ ನಡುವೆ ಡಿಕ್ಕಿ, ಶ್ರೀಗಳಿಗೆ ಗಾಯವಾಗಿದ್ದು ಎರಡು ಆಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.

By

Published : Mar 17, 2019, 11:04 PM IST

ಬಂಥನಾಳ ಶ್ರೀಗಳ ಕಾರು ಡಿಕ್ಕಿ

ವಿಜಯಪುರ: ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಇನ್ನೊವಾ ಕಾರ್ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳಿಗೆ ಗಾಯವಾಗಿದ್ದು ಎರಡು ಆಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ನಂದ್ರಾಳ ಕ್ರಾಸ್ ಬಳಿ ನಡೆದಿದೆ.

ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನಕ್ಕೆ ಬಂಥನಾಳ ಶ್ರೀಗಳ ಕಾರು ಡಿಕ್ಕಿ

ಏರ್ ಬ್ಯಾಗ್ ನಿಂದಾಗಿ ಶ್ರೀಗಳು ಅಪಾಯದಿಂದ ಪಾರಾಗಿದ್ದು ಅವರನ್ನು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಲ್ಲಾಪುರ ದಿಂದ ವಿಜಯಪುರ ಕಡೆಗೆ ಬಂಥನಾಳ ಸ್ವಾಮೀಜಿಗಳು ಆಗಮಿಸುತ್ತಿದ್ದರು.ಈ ಸಂದರ್ಭದಲ್ಲಿ ಸೊಲ್ಲಾಪುರಕ್ಕೆ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಖದೀಮರ ವಾಹನ ಮತ್ತು ಶ್ರೀಗಳ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆಗಳನ್ನು ಸಂಭವಿಸಿದೆ.

ರೊಚ್ಚಿಗೆದ್ದ ನಂದ್ರಾಳ್, ಭತಗುಣಕಿ ಗ್ರಾಮಸ್ಥರು ಗೋವು ಸಾಗಿಸುತ್ತಿದ್ದ 5 ವಾಹನಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಗೋವು ಸಾಗಿಸುತ್ತಿದ್ದ 6 ಜನ ಖದೀಮರನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details