ಕರ್ನಾಟಕ

karnataka

ETV Bharat / state

ಭಾರೀ ಮಳೆಗೆ ಮನೆ ಕುಸಿತ: ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ

ಭಾರೀ ಮಳೆ ಸುರಿದ ಪರಿಣಾಮ ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ ಹಾಗೂ ನಾಲತವಾಡದಲ್ಲಿ ಪ್ರತ್ಯೇಕವಾಗಿ ಮನೆ ಹಾಗೂ ಛಾವಣಿ ಧರೆಗುರುಳಿದಿವೆ. ಮನೆಗಳಿಗೆ ಹಾನಿ ಆಗಿರುವ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿರುವ ಕುಟುಂಬದ ಸದಸ್ಯರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

By

Published : Oct 21, 2020, 3:09 PM IST

House collapses
ಭಾರೀ ಮಳೆಗೆ ಮನೆ ಕುಸಿತ: ಪರಿಹಾರ ನೀಡಲು ಒತ್ತಾಯ

ಮುದ್ದೇಬಿಹಾಳ: ಭಾರೀ ಮಳೆ ಸುರಿದ ಪರಿಣಾಮ ತಾಲೂಕಿನ ಬಿಜ್ಜೂರ ಹಾಗೂ ನಾಲತವಾಡದಲ್ಲಿ ಪ್ರತ್ಯೇಕವಾಗಿ ಮನೆ ಹಾಗೂ ಛಾವಣಿ ಧರೆಗುರುಳಿದ ಘಟನೆ ನಡೆದಿದೆ.

ಭಾರೀ ಮಳೆಗೆ ಮನೆ ಕುಸಿತ: ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ

ತಾಲೂಕಿನ ಬಿಜ್ಜೂರ ಗ್ರಾಮದ ಹಣಮವ್ವ ಮಲ್ಲಪ್ಪ ಬಿರಾದಾರ ಎಂಬುವರ ಮನೆ ಮಳೆಗೆ ಕುಸಿದಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಛಾವಣಿ ಇದ್ದ ಕಾರಣ ತೇವಗೊಂಡು ಭಾರ ತಾಳದೆ ಧರೆಗುರುಳಿದೆ ಎನ್ನಲಾಗಿದೆ. ಕುಟುಂಬದ ಸದಸ್ಯರು ಪಕ್ಕದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು. ಇದರಿಂದ ಅನಾಹುತ ತಪ್ಪಿದಂತಾಗಿದೆ.

ಭಾರೀ ಮಳೆಗೆ ನೆಲಕ್ಕುರುಳಿದ ಛಾವಣಿ

ಇನ್ನು ನಾಲತವಾಡದ ಪಟ್ಟಣದಲ್ಲಿ ನೇಕಾರ ಕುಟುಂಬದ ಪಾರ್ವತವ್ವ ರುದ್ರಗಂಟಿ ಎಂಬುವರ ಮನೆಯ ಗೋಡೆ ಕುಸಿದಿದ್ದು, ಛಾವಣಿಯ ಜಂತಿ ಮುರಿದಿದೆ. ಪ್ರತ್ಯೇಕ ಘಟನೆಗಳಲ್ಲಿ ಮನೆಗಳಿಗೆ ಹಾನಿ ಆಗಿರುವ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿರುವ ಕುಟುಂಬದ ಸದಸ್ಯರು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details