ವಿಜಯಪುರ: ಮದುವೆಯೆಂಬುದು ಯಾರಿಗೆ, ಯಾರೊಂದಿಗೆ ನಡೆಯುತ್ತೆ ಎಂದು ಹೇಳಲಾಗದು. ಮದುವೆಯೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ಭೂಮಿ ಮೇಲೆ ನಡೆಯುತ್ತೆ ಎಂಬ ಮಾತಿದೆ. ಅದರಂತೆ ವಿಜಯಪುರ ಇಂದು ವಿಶಿಷ್ಟವಾದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.
ಇಲ್ಲಿ ಮೌನವೇ ಸಂಭಾಷಣೆ
ವಿಜಯಪುರ: ಮದುವೆಯೆಂಬುದು ಯಾರಿಗೆ, ಯಾರೊಂದಿಗೆ ನಡೆಯುತ್ತೆ ಎಂದು ಹೇಳಲಾಗದು. ಮದುವೆಯೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ಭೂಮಿ ಮೇಲೆ ನಡೆಯುತ್ತೆ ಎಂಬ ಮಾತಿದೆ. ಅದರಂತೆ ವಿಜಯಪುರ ಇಂದು ವಿಶಿಷ್ಟವಾದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.
ಇಲ್ಲಿ ಮೌನವೇ ಸಂಭಾಷಣೆ
ಅಲ್ಲಿ ಇಬ್ಬರಿಗೂ ಮಾತು ಬರುವುದಿಲ್ಲ. ವರ ಮತ್ತು ವಧು ಹಸೆಮಣೆಯೇರಿದ್ದರು. ಬಳ್ಳೊಳ್ಳಿ ಗ್ರಾಮದ ವರ ನಿಂಗಣ್ಣನಿಗೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ವಧು ಪೂಜಾ ಜೋಡಿಯಾದಳು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಈ ವಿಶಿಷ್ಟ ವಿವಾಹ ನೆರವೇರಿತು.
ಹುಟ್ಟು ಮೂಗರಾಗಿರುವ ಇವರ ವಿವಾಹ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ನೆರವೇರಿತು. ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಮಿತ್ರರು ಇವರ ಮೌನ ಬದುಕು ಬಂಗಾರವಾಗಲೆಂದು ಹರಸಿದರು.