ಕರ್ನಾಟಕ

karnataka

By

Published : Jun 12, 2019, 9:03 PM IST

Updated : Jun 12, 2019, 9:27 PM IST

ETV Bharat / state

ಮದುವೆಯ ಈ ಬಂಧಕೆ ಮೌನವೇ ಸಂಭಾಷಣೆ: ಇದು ಮೂಕ ಜೋಡಿಯ ದಾಂಪತ್ಯ ಗೀತೆ

ಮೂಕ ಜೋಡಿಯ ವಿವಾಹ ಮಹೋತ್ಸವ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಆಗಮಿಸಿದ ಬಂಧುಮಿತ್ರರು ವಧುವರರನ್ನು ಹರಸಿದರು.

ಮೂಗ ಜೋಡಿಯ ವಿವಾಹ ಮಹೋತ್ಸವ

ವಿಜಯಪುರ: ಮದುವೆಯೆಂಬುದು ಯಾರಿಗೆ, ಯಾರೊಂದಿಗೆ ನಡೆಯುತ್ತೆ ಎಂದು ಹೇಳಲಾಗದು. ಮದುವೆಯೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ಭೂಮಿ ಮೇಲೆ ನಡೆಯುತ್ತೆ ಎಂಬ ಮಾತಿದೆ. ಅದರಂತೆ ವಿಜಯಪುರ ಇಂದು ವಿಶಿಷ್ಟವಾದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.

ಮೌನ ಬದುಕಿಗೆ ಮದುವೆ ಸಂಭ್ರಮ

ಇಲ್ಲಿ ಮೌನವೇ ಸಂಭಾಷಣೆ

ಅಲ್ಲಿ ಇಬ್ಬರಿಗೂ ಮಾತು ಬರುವುದಿಲ್ಲ. ವರ ಮತ್ತು ವಧು ಹಸೆಮಣೆಯೇರಿದ್ದರು. ಬಳ್ಳೊಳ್ಳಿ ಗ್ರಾಮದ ವರ ನಿಂಗಣ್ಣನಿಗೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ವಧು ಪೂಜಾ ಜೋಡಿಯಾದಳು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಈ ವಿಶಿಷ್ಟ ವಿವಾಹ ನೆರವೇರಿತು.

ಹುಟ್ಟು ಮೂಗರಾಗಿರುವ ಇವರ ವಿವಾಹ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ನೆರವೇರಿತು. ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಮಿತ್ರರು ಇವರ ಮೌನ ಬದುಕು ಬಂಗಾರವಾಗಲೆಂದು ಹರಸಿದರು.

Last Updated : Jun 12, 2019, 9:27 PM IST

For All Latest Updates

TAGGED:

ABOUT THE AUTHOR

...view details