ಕುಮಟಾದಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಮಾವೇಶ: ಸಮುದಾಯದ ಒಗ್ಗಟ್ಟಿಗೆ ಒಕ್ಕೊರಲಿನ ಚಿಂತನೆ!
ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ.
ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ
ಕಾರವಾರ: ಐತಿಹಾಸಿಕ ಮಿರ್ಜಾನ್ ಕೋಟೆ ಸಮೀಪದ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ "ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ" ಗುರುವಾರ ನಡೆಯಿತು. ಹರಿದು ಹಂಚಿಹೋಗಿ ಇನ್ನೂ ಕೂಡ ಬಡತನದ ಬೇಗೆಯಲ್ಲಿ ಬೇಯುತ್ತಿರುವವರನ್ನು ಮುನ್ನೆಲೆಗೆ ತಂದು ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಒಕ್ಕೊರಲಿನ ಚಿಂತನೆ ನಡೆಸಲಾಯಿತು.