ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಬಗೆಹರಿಯದ ಭಾಷಾ ವಿವಾದ: ಹಿಂದಿ ಹೇರಿಕೆ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

ಕಾರವಾರ ನಗರಸಭಾ ವ್ಯಾಪ್ತಿಯ ಸ್ಥಳೀಯ ವಾರ್ಡ್ ಗಳ ಸೂಚನಾ ಫಲಕಗಳನ್ನು ಕೊಂಕಣಿ ಭಾಷಿಗರಿಗೆ ಅರ್ಥವಾಗಲು ಹಿಂದಿಯಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

By

Published : Jun 25, 2022, 7:07 PM IST

language-controversy-in-karwar
ಕಾರವಾರದಲ್ಲಿ ಬಗೆಹರಿಯದ ಭಾಷಾ ವಿವಾದ: ಹಿಂದಿ ಹೇರಿಕೆ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ !

ಕಾರವಾರ:ಗಡಿ ಜಿಲ್ಲೆ ಕಾರವಾರದಲ್ಲಿ ಭಾಷಾ ವಿವಾದ ದಿನೇ ದಿನೆ ಹೆಚ್ಚಾಗುತ್ತಿದೆ. ನಗರಸಭೆ ಸ್ಥಳೀಯ ವಾರ್ಡ್ ಗಳ ಸೂಚನಾ ಫಲಕಗಳನ್ನು ಕೊಂಕಣಿ ಭಾಷಿಗರಿಗೆ ಅರ್ಥವಾಗಲು ಹಿಂದಿಯಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆಯ ನಡೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

ಹಿಂದಿ ಹೇರಿಕೆಗೆ ಕನ್ನಡಪರ ಸಂಘಟನೆಗಳ ವಿರೋಧ :ಗೋವಾ ಗಡಿ ಪ್ರದೇಶವಾದ ಕಾರವಾರದಲ್ಲಿ ಕೊಂಕಣಿ ಭಾಷಿಗರ ಸಂಖ್ಯೆ ಅಧಿಕವಿದೆ. ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯಲ್ಲಿನ ವಾರ್ಡ್ ಗಳ ಸೂಚನ ಫಲಕಗಳನ್ನು ಗೋವಾ ಮತ್ತು ಮುಂಬೈನಿಂದ ಆಗಮಿಸುವ ಕೆಲವರಿಗೆ ಕನ್ನಡ ಬಾರದ ಕಾರಣಕ್ಕೆ ಹಿಂದಿ ಭಾಷೆಯಲ್ಲಿ ಬರೆಸಲಾಗಿತ್ತು. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಫಲಕಗಳನ್ನು ಹಾಕಿದ್ದು ಕರ್ನಾಟಕದಲ್ಲಿ ಕನ್ನಡ ಒಂದೇ ಭಾಷೆ ಇರಬೇಕು. ಯಾವುದೇ ಕಾರಣಕ್ಕೂ ಸರ್ಕಾರವೇ ಅನ್ಯ ಭಾಷೆಗೆ ಅವಕಾಶ ಕೊಡಬಾರದು ಎಂದು ನಗರಸಭೆ ನಡೆಯ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಕಾರವಾರದಲ್ಲಿ ಬಗೆಹರಿಯದ ಭಾಷಾ ವಿವಾದ: ಹಿಂದಿ ಹೇರಿಕೆ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ !

ಜೊತೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರಸಭೆ ಅಳವಡಿಸಿದ್ದ ಫಲಕಗಳಿಗೆ ಮಸಿ ಬಳಿದಿದ್ದಾರೆ. ಈ ಬಗ್ಗೆ ಕೊಂಕಣಿ ರಕ್ಷಣಾ ಮಂಚ್ ಎನ್ನುವ ಸಂಘಟನೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ.

ಕನ್ನಡಕ್ಕೆ ಅಪಮಾನ ಮಾಡಿದರೆ ಉಗ್ರ ಹೋರಾಟ :ಕರ್ನಾಟಕದಲ್ಲಿ ಎಲ್ಲಾ ಭಾಷೆಗೂ ಅವಕಾಶವಿದೆ. ಹಾಗಂತ ಸರ್ಕಾರವೇ ಕನ್ನಡ ಬಿಟ್ಟು ಬೇರೆ ಭಾಷೆಗಳ ಫಲಕವನ್ನು ಹಾಕಿದರೆ ಕನ್ನಡವನ್ನು ರಕ್ಷಣೆ ಮಾಡುವವರು ಯಾರು. ನೆರೆಯ ಗೋವಾದಲ್ಲಿ ಯಾವುದೇ ಕಾರಣಕ್ಕೂ ಅವರು ಕನ್ನಡ ಫಲಕಗಳನ್ನು ಹಾಕಲು ಬಿಡುವುದಿಲ್ಲ. ಮತ್ತೆ ಕೊಂಕಣಿ ಅರ್ಥ ಕಲ್ಪಿಸುವಂತೆ ಹಿಂದಿ ಭಾಷೆಯ ಫಲಕಗಳನ್ನು ಹಾಕಿದರೆ ಧ್ವಂಸ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ರವಾನಿಸಿದ್ದಾರೆ.

ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ, ಆದರೆ ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿ ಹೇರಿಕೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ರೀತಿಯಾಗಿ ಕನ್ನಡಕ್ಕೆ ಅಪಮಾನ ಮಾಡುವುದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕರವೇ ರಾಜ್ಯ ಉಪಾಧ್ಯಕ್ಷ ಜಗದೀಶ ಗೌಡ ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ನಡೆಯ ವಿರುದ್ಧ ಕಾರವಾರದಲ್ಲಿ ಕೊಂಕಣಿ ರಕ್ಷಣಾ ಮಂಚ್ ನವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರಸಭೆ ಮತ್ತೆ ಕೊಂಕಣಿಯಲ್ಲಿ ಫಲಕಗಳನ್ನು ಬರೆಸಲು ಮುಂದಾಗಿದ್ದಾಗಿ ಎಂದು ಹೇಳಲಾಗಿದೆ.

ಓದಿ :ನರೇಗಾ ಗೋಲ್ಮಾಲ್​ ಪ್ರಶ್ನಿಸಿದ್ದಕ್ಕೆ ಹಲ್ಲೆ: ಎರಡು ಕುಟುಂಬಗಳ ನಡುವೆ ಕಲಹ, ಮಹಿಳೆ ಸಾವು

ABOUT THE AUTHOR

...view details