ಕರ್ನಾಟಕ

karnataka

By

Published : Jun 3, 2020, 12:38 PM IST

ETV Bharat / state

ಗೋವಾ ಬಳಿ ಆಳಸಮುದ್ರದಲ್ಲಿ ಬೋಟ್ ಮುಳುಗಡೆ: 8 ಮೀನುಗಾರರ ರಕ್ಷಣೆ

ಗೋವಾ ಬಳಿಯ ಆಳಸಮುದ್ರದಲ್ಲಿ ನಿಸರ್ಗ್​ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಬೋಟ್​ ಮುಳುಗಡೆಯಾಗಿದೆ. ಬೋಟ್​ನಲ್ಲಿದ್ದ 8 ಮೀನುಗಾರರನ್ನು ರಕ್ಷಿಸಲಾಗಿದೆ.

ಬೋಟ್ ಮುಳುಗಡೆಯ ಸಾಂದರ್ಭಿಕ ದೃಶ್ಯ
ಬೋಟ್ ಮುಳುಗಡೆಯ ಸಾಂದರ್ಭಿಕ ದೃಶ್ಯ

ಕಾರವಾರ:ನಿಸರ್ಗ್​ ಚಂಡಮಾರುತದ ಅಬ್ಬರಕ್ಕೆ ಗೋವಾ ಬಳಿಯ ಆಳಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿದ್ದು, ಅದೃಷ್ಟವಶಾತ್ 8 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿಯ ಮಲ್ಪೆ ಮೂಲದ ದುರ್ಗಾ ಹನುಮ ಹೆಸರಿನ ಯಾಂತ್ರಿಕ ಬೋಟ್ ಮೀನುಗಾರಿಕೆಗೆ ತೆರಳಿ ವಾಪಸ್​ ಆಗುತ್ತಿದ್ದಾಗ ನಿಸರ್ಗ್​ ಚಂಡಮಾರುತದ ಅಬ್ಬರಕ್ಕೆ ಸಿಲುಕಿದೆ. ಅಲೆಗಳ ಅಬ್ಬರ ಜೋರಾಗುತ್ತಿದ್ದಂತೆ ಬೋಟ್ ಕೂಡ ಮುಳುಗಡೆಯಾಗಿದೆ.

ಸಮುದ್ರದಲ್ಲಿನ ಸಾಂದರ್ಭಿಕ ದೃಶ್ಯ

ಉತ್ತರಕನ್ನಡ ಮೂಲದ ಒಟ್ಟು 8 ಮೀನುಗಾರರು ಬೋಟ್​ನಲ್ಲಿದ್ದು ಅವರನ್ನು ಅಲ್ಲಿಯೇ ಇದ್ದ ಶಿವ ಭೈರವ ಮತ್ತು ಬ್ರಾಹ್ಮಿ ಹೆಸರಿನ ಬೋಟ್​ನವರು ರಕ್ಷಣೆ ಮಾಡಿದ್ದಾರೆ‌. ಬಳಿಕ ಮೀನುಗಾರರನ್ನು ಗೋವಾ ಬಂದರಿಗೆ ಕರೆತರಲಾಗಿದೆ. ಗಾಳಿ ಮಳೆ ಅಬ್ಬರದಿಂದಾಗಿ ಮೀನುಗಾರಿಕೆಗೆ ತೆರಳಿದ ಬೋಟ್​ಗಳು ಗೋವಾ ಬಂದರಿನಲ್ಲಿ ರಕ್ಷಣೆ ಪಡೆದಿದ್ದಾರೆ.

ABOUT THE AUTHOR

...view details