ಕರ್ನಾಟಕ

karnataka

By

Published : Dec 23, 2019, 2:22 PM IST

ETV Bharat / state

ತುಮಕೂರಿನಲ್ಲಿ ಮನೆ ಕಳೆದುಕೊಂಡವರಿಗೆ ಸ್ವಾಮೀಜಿ ಸಹಾಯ ಹಸ್ತ

ತುಮಕೂರು ಪಾವಗಡ ಪಟ್ಟಣದಲ್ಲಿ ಬೆಂಕಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬವೊಂದಕ್ಕೆಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಅಧ್ಯಕ್ಷ ಜಪಾನಂದಾ ಸ್ವಾಮೀಜಿ ಸಹಾಯ ಹಸ್ತ ಚಾಚಿದ್ದಾರೆ.

Swamiji helps a family who lost their house in a fire accident, Swamiji helps a family who lost their house in a fire accident
ಸ್ವಾಮೀಜಿಯಿಂದ ಸಹಾಯ ಹಸ್ತ

ತುಮಕೂರು: ಬೆಂಕಿ ಅವಘಡದಿಂದ ಮನೆ ಕಳೆದುಕೊಂಡ ಕುಟುಂಬವೊಂದಕ್ಕೆ ಪಾವಗಡ ಪಟ್ಟಣದ ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಅಧ್ಯಕ್ಷ ಜಪಾನಂದಾ ಸ್ವಾಮೀಜಿ ಸಹಾಯ ಹಸ್ತ ಚಾಚಿದ್ದಾರೆ.

ಸ್ವಾಮೀಜಿಯಿಂದ ಸಹಾಯ ಹಸ್ತ

ಪಾವಗಡ ನೀಲಮ್ಮನ ಹಳ್ಳಿ ಗ್ರಾಮದ ನರಸಿಂಹಪ್ಪ ಅನಿತ ದಂಪತಿಯ ಗುಡಿಸಲು ಮನೆ ಆಕಸ್ಮಿಕ ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿತ್ತು. ಇದರಿಂದ ಬಡ ಕುಟುಂಬ ಬೀದಿ ಪಾಲಾಗಿತ್ತು. ಈ ಬಗ್ಗೆ ನರಸಿಂಹಪ್ಪ ತಮ್ಮ ಸಂಕಷ್ಟವನ್ನು ಜಪಾನಂದಾ ಸ್ವಾಮೀಜಿ ಬಳಿ ತೊಡಿಕೊಂಡಿದ್ದರು.

ಬಡ ಕುಟುಂಬದ ನೋವಿಗೆ ಸ್ಪಂದಿಸಿದ ಜಪಾನಂದ ಸ್ವಾಮೀಜಿ, ತಕ್ಷಣಕ್ಕೆ ಜೀವನ ಕಟ್ಟಿಕೊಳ್ಳಲು ಅವಶ್ಯವಿರುವ ಆಹಾರ ಪದಾರ್ಥ, ವಸ್ತ್ರ, ಅಡುಗೆ ಪಾತ್ರೆ, ಹಾಗೂ ಪ್ಲಾಸ್ಟಿಕ್​ ಸಾಮಾಗ್ರಿಗಳು, ಹಾಗೂ ದಂಪತಿಯ ಇಬ್ಬರು ಮಕ್ಕಳಿಗೆ ಶಾಲಾ ಬ್ಯಾಗ್​, ನೋಟ್​ ಬುಕ್​ ವಿತರಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಾಯ ಹಸ್ತ ನೀಡುವುದಾಗಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details