ಕರ್ನಾಟಕ

karnataka

By

Published : Jun 19, 2022, 9:39 AM IST

ETV Bharat / state

ಮಾಯಸಂದ್ರದಲ್ಲಿ ಆರ್​.ಅಶೋಕ್ ವಾಸ್ತವ್ಯ: ಗ್ರಾಮಸ್ಥರ ಅಹವಾಲು ಸ್ವೀಕಾರ

ಮಾಯಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಸಚಿವ ಆರ್.ಅಶೋಕ್ ಗ್ರಾಮಸ್ಥರ ಸಮಸ್ಯೆ ಆಲಿಸುತ್ತಿದ್ದಾರೆ.

minister r ashok Stay in mayasandra village
ಸಚಿವ ಆರ್​ ಅಶೋಕ್ ಗ್ರಾಮ ವಾಸ್ತವ್ಯ

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ನಡೆಯುತ್ತಿರುವ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಸಲುವಾಗಿ ಸಚಿವ ಆರ್.ಅಶೋಕ್ ಎರಡು ದಿನ ವಾಸ್ತವ್ಯ ಹೂಡಿದ್ದಾರೆ. ಶನಿವಾರ ಬೆಳಗ್ಗೆಯಿಂದ ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದ ಸಚಿವರು, ನಿನ್ನೆ ರಾತ್ರಿ ಮಾಯಸಂದ್ರ ಬಳಿಯಿರುವ ಬಿಜಿಎಸ್ ಆಶ್ರಮದಲ್ಲಿ ತಂಗಿದ್ದರು. ತುರುವೇಕೆರೆ ಶಾಸಕ ಮಸಾಲ ಜಯರಾಮ್ ವಾಸ್ತವ್ಯದಲ್ಲಿ ಭಾಗಿಯಾಗಿದ್ದರು.


ಇಂದು ಬೆಳಗ್ಗೆ ಗ್ರಾಮದಲ್ಲಿ ವಾಕಿಂಗ್ ಮಾಡುತ್ತಾ ಗ್ರಾಮಸ್ಥರ ಸಮಸ್ಯೆ ಕೇಳಿದರು. ಶಾಸಕ ಮಸಾಲ ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಚಿವರೊಂದಿಗಿದ್ದರು. ರಸ್ತೆ ಬದಿಯ ಅಂಗಡಿಯೊಂದರಲ್ಲಿ ಟೀ ಕುಡಿಯುತ್ತಾ ಸಚಿವ ಅಶೋಕ್‌ ಜನರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದರು.

ಇದನ್ನೂ ಓದಿ:395.73 ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಣೆ: ಪ್ರತಾಪ್ ಸಿಂಹ

ABOUT THE AUTHOR

...view details