ಕರ್ನಾಟಕ

karnataka

ETV Bharat / state

ಹಸಿವಿನಿಂದ ನರಳುತ್ತಿರುವವರಿಗೆ ಸಿದ್ಧಗಂಗಾ ಮಠದಿಂದ ಆಹಾರ ವ್ಯವಸ್ಥೆ: ಜಿಲ್ಲಾಧಿಕಾರಿ

ಕೊರೊನಾ ವೈರಸ್​ ಹಾವಳಿಯಿಂದಾಗಿ ತುಮಕೂರು ಸಂಪೂರ್ಣ ಲಾಕ್​ಡೌನ್​ ಆಗಿದೆ. ಈ ವೇಳೆ ಬೆಂಗಳೂರು, ಶಿವಮೊಗ್ಗ ಹೆದ್ದಾರಿಯಲ್ಲಿ ಹಸಿವಿನಿಂದ ನರಳುವ ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಸಿದ್ಧಗಂಗಾ ಮಠದ ವತಿಯಿಂದ ಆಹಾರ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

By

Published : Apr 1, 2020, 5:30 PM IST

siddaganga matha
ಸಿದ್ಧಗಂಗಾ ಮಠ

ತುಮಕೂರು:ಕೊರೊನಾ ರೋಗಾಣು ಹರಡುವುದನ್ನು ತಡೆಯಲು ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಿದೆ. ಈ ವೇಳೆ ಬೆಂಗಳೂರು, ಶಿವಮೊಗ್ಗ ಹೆದ್ದಾರಿಯಲ್ಲಿ ಹಸಿವಿನಿಂದ ನರಳುವ ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಸಿದ್ಧಗಂಗಾ ಮಠದ ವತಿಯಿಂದ ಆಹಾರ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಕೇಶ್​ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ರಾಕೇಶ್​ ಕುಮಾರ್

ಈ ಕುರಿತಂತೆ ಈಗಾಗಲೇ ಸಿದ್ದಗಂಗಾ ಮಠದ ಸ್ವಾಮೀಜಿ ಜೊತೆ ಮಾತುಕತೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರಿದ್ದು ಅವರಿಗೆ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆವು. ಇದಕ್ಕೆ ಶ್ರೀಗಳು ಅನುಮತಿಸಿದ್ದು ಆಹಾರ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ABOUT THE AUTHOR

...view details