ತುಮಕೂರು :ಪಾವಗಡ ಪಟ್ಟಣದ ಮಿಲ್ಗಳಿಂದ ಖರೀದಿಸಿದ ಬಿತ್ತನೆ ಶೇಂಗಾ ಬೀಜ 10 ದಿನವಾದರೂ ಮೊಳಕೆ ಒಡೆಯದ ಕಾರಣ, ಸೂಕ್ತ ಪರಿಹಾರ ನೀಡಲು ಖರೀದಿಸಿದ ರೈತರು ತಹಶಿಲ್ದಾರ್ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳಪೆ ಬಿತ್ತನೆ ಬೀಜ ಪೂರೈಕೆ ಆರೋಪ, ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಮಿಲ್ಗಳಿಂದ ಖರೀದಿಸಿದ ಬಿತ್ತನೆ ಶೇಂಗಾ ಬೀಜ 10 ದಿನವಾದರೂ ಮೊಳಕೆ ಒಡೆಯದ ಕಾರಣ ಸೂಕ್ತ ಪರಿಹಾರ ನೀಡಲು, ರೈತರು ತಹಶಿಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ಪರಿಹಾರಕ್ಕಾಗಿ ತಹಶಿಲ್ದಾರ್ ಮೊರೆ ಹೋದ ರೈತರು
ಈ ವೇಳೆ ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ, ಚಿಕ್ಕಹಳ್ಳಿ ಗ್ರಾಮದ ಸುಮಾರು 11 ರೈತರು ಪಾವಗಡ ಪಟ್ಟಣದ ಬೋಮ್ಮತನಹಳ್ಳಿ ರಸ್ತೆಯ ಮಾರುತಿ ಮಿಲ್ನಲ್ಲಿ ಬಿತ್ತನೆ ಶೇಂಗಾ ಬೀಜ ಖರೀದಿಸಿದ್ದಾರೆ.
ಆದರೆ ಹತ್ತು ದಿನಗಳ ಮೇಲಾದರು ಬೀಜ ಮೊಳಕೆ ಒಡೆಯದ ಕಾರಣ ಕಳಪೆ ಬಿತ್ತನೆ ಬೀಜ ಪೂರೈಕೆ ಮಾಡಿದ ಮಿಲ್ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.