ಕರ್ನಾಟಕ

karnataka

By

Published : Jun 26, 2020, 11:16 PM IST

ETV Bharat / state

ಹಣಗೆರೆಕಟ್ಟೆ ಅರಣ್ಯದಲ್ಲಿ ಅನಾಮಧೇಯ ಯುವಕ ನೇಣಿಗೆ ಶರಣು..!

ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದ ಬಳಿ ಸುಮಾರು‌ 30 ವರ್ಷದ ಯುವಕನ ಶವ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Youth suicide in a forest
ಯುವಕ ನೇಣಿಗೆ ಶರಣು.

ಶಿವಮೊಗ್ಗ:ಅನಾಮಧೇಯ ಯುವಕನೊಬ್ಬ ಹಣಗೆರೆಕಟ್ಟೆಯ ಬಳಿಯ ಅರಣ್ಯದಲ್ಲಿ ನೇಣಿಗೆ ಶರಣಾಗಿದ್ದಾನೆ. ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದ ಬಳಿ ಸುಮಾರು‌ 30 ವರ್ಷದ ಯುವಕನ ಶವ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈತ ಕಳೆದ ಮೂರು ದಿನದ ಹಿಂದೆ ನೇಣಿಗೆ‌ ಶರಣಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಅರಣ್ಯ ರಕ್ಷಕರು ಕಾಡಿನಲ್ಲಿ ಬೀಟ್ ಮಾಡುವಾಗ ಯುವಕ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಮಾಳೂರು ಪೊಲೀಸರು ಭೇಟಿ ನೀಡಿ, ಯುವಕನ‌ ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ABOUT THE AUTHOR

...view details