ಕರ್ನಾಟಕ

karnataka

By

Published : Jul 13, 2020, 5:08 PM IST

ETV Bharat / state

ಸ್ವಯಂ ಪ್ರೇರಿತ ಬಂದ್​ಗೆ ನಿರ್ಧರಿಸಿದ ಶಿವಮೊಗ್ಗ ವರ್ತಕರು

ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಗಾಂಧಿ ಬಜಾರ್​​ನಲ್ಲಿ ಒಂದು ತಿಂಗಳ ಕಾಲ ಮಧ್ಯಾಹ್ನ ಮೂರು ಗಂಟೆ ಮೇಲೆ ಸ್ವಯಂ ಪ್ರೇರಿತ ಲಾಕ್​​ಡೌನ್ ಮಾಡಲು ವ್ಯಾಪಾರಿಗಳು ಮುಂದಾಗಿದ್ದಾರೆ.

shimoga shop owners decided to close shops afternoon
ಸ್ವಯಂ ಪ್ರೇರಿತ ಬಂದ್​ಗೆ ನಿರ್ಧರಿಸಿದ ಶಿವಮೊಗ್ಗ ವರ್ತಕರು

ಶಿವಮೊಗ್ಗ: ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಅನೇಕ ವರ್ತಕರು ಸ್ವಯಂ ಪ್ರೇರಿತ ಬಂದ್​ ಮಾಡಲು ನಿರ್ಧರಿಸಿದ್ದಾರೆ.

ಸ್ವಯಂ ಪ್ರೇರಿತ ಬಂದ್​ಗೆ ನಿರ್ಧರಿಸಿದ ಶಿವಮೊಗ್ಗ ವರ್ತಕರು

ಇಂದಿನಿಂದ ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಗಾಂಧಿ ಬಜಾರ್​​ ಅನ್ನು ಒಂದು ತಿಂಗಳ ಕಾಲ ಮಧ್ಯಾಹ್ನ ಮೂರು ಗಂಟೆ ಮೇಲೆ ಸ್ವಯಂ ಪ್ರೇರಿತ ಲಾಕ್​​ಡೌನ್ ಮಾಡಲು ಗಾಂಧಿ ಬಜಾರ್ ವರ್ತಕರ ಸಂಘ ನಿರ್ಧರಿಸಿದ್ದು, ಅನೇಕ ವರ್ತಕರು ಬೆಂಬಲ ಸೂಚಿಸಿದ್ದಾರೆ.

ಸ್ವಯಂ ಪ್ರೇರಿತ ಬಂದ್​ಗೆ ನಿರ್ಧರಿಸಿದ ಶಿವಮೊಗ್ಗ ವರ್ತಕರು

ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ವಸ್ತುಗಳ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡುವುದಾಗಿ ಇಂದು ನಡೆದ ಸಭೆಯಲ್ಲಿ ವರ್ತಕರು ತಿಳಿಸಿದ್ದು, ಮಹಾನಗರ ಪಾಲಿಕೆ ಯಾವುದೇ ರೀತಿಯ ಆದೇಶ ನೀಡಿಲ್ಲ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರೇ ನಿರ್ಧರಿಸಿದ್ದಾರೆ ಎಂದು ಪಾಲಿಕೆ ಆಯುಕ್ತರು ದೂರವಾಣಿ ಮೂಲಕ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ABOUT THE AUTHOR

...view details