ಕರ್ನಾಟಕ

karnataka

By

Published : Jun 27, 2020, 2:04 PM IST

ETV Bharat / state

ಮರುಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು, ಸಿಬ್ಬಂದಿಯಲ್ಲಿ ಗೊಂದಲ

ಮರುಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಶಾಲಾ ದಿನಗಳ ಭಾವಚಿತ್ರ ಕೊಟ್ಟ ಪರಿಣಾಮ, ಗುರುತು ಪತ್ತೆ ಹಚ್ಚುವಲ್ಲಿ ಸಿಬ್ಬಂದಿಗೆ ಗೊಂದಲ ಉಂಟಾಯಿತು.

SSLC exams begin amid Covid-19
ಸಿಬ್ಬಂದಿಗೆ ಗೊಂದಲ

ರಾಯಚೂರು:ನಗರದ ಪೊಲೀಸ್ ಕಾಲೊನಿಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಗುರುತು ಪತ್ತೆ ಮಾಡುವಲ್ಲಿ ಗೊಂದಲ ಉಂಟಾಗಿರುವ ಘಟನೆ ನಡೆದಿದೆ.

ಮರುಪರೀಕ್ಷೆ (ರಿಪೀಟರ್ಸ್) ಬರೆಯಲು ಬಂದವರು ಮಾತ್ರ ಈ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದು, ಹಾಲ್ ​​​ಟಿಕೆಟ್​​​​ಗೆ ಶಾಲಾ ದಿನಗಳಲ್ಲಿನ ಭಾವಚಿತ್ರ ಕೊಟ್ಟಿದ್ದರಿಂದ ಸಿಬ್ಬಂದಿಯಲ್ಲಿ ಗೊಂದಲ ಉಂಟಾಯಿತು.

ಮರುಪರೀಕ್ಷೆ ಬರೆಯಲು ಬಂದವರಿಂದ ಸಿಬ್ಬಂದಿಗೆ ಗೊಂದಲ

ಅನುಮಾನಗೊಂಡು ಪರೀಕ್ಷಾರ್ಥಿಗಳನ್ನು ವಾಪಸ್ ಕಳುಹಿಸಲು ಸಿಬ್ಬಂದಿ ಮುಂದಾಗಿದ್ದರು. ನಂತರ, ಇತರ ದಾಖಲೆಗಳನ್ನ ಪರಿಶೀಲಿಸಿದ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು.

ABOUT THE AUTHOR

...view details