ಕರ್ನಾಟಕ

karnataka

By

Published : Aug 8, 2020, 2:19 PM IST

ETV Bharat / state

ಕಾವೇರಿ-ಕಬಿನಿ ಅಬ್ಬರಕ್ಕೆ ತಿ‌‌. ನರಸೀಪುರ ದೇವಸ್ಥಾನ ಬಾಗಿಲು ಬಂದ್

ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಮೆಟ್ಟಿಲುಗಳು ನೀರಿನಲ್ಲಿ ಮುಳುಗಡೆಯಾಗಿವೆ. ದೇವಸ್ಥಾನದ ಒಳಗಡೆ ಮತ್ತು ಮೆಟ್ಟಿಲುಗಳ ಬಳಿ ಸಾರ್ವಜನಿಕರು ಮತ್ತು ಪ್ರವಾಸಿಗರು ಆಗಮಿಸುವ ಹಿನ್ನೆಲೆ ದೇವಸ್ಥಾನದ ಮುಖ್ಯದ್ವಾರವನ್ನು ತಾಲೂಕು ಆಡಳಿತ ಬಂದ್ ಮಾಡಿದೆ..

Water released from KRS and Kabini: t. Narasipura temple bund
ಕಾವೇರಿ-ಕಬಿನಿ ಅಬ್ಬರಕ್ಕೆ ತಿ‌‌. ನರಸೀಪುರ ದೇವಸ್ಥಾನ ಬಾಗಿಲು ಬಂದ್

ಮೈಸೂರು :ಕಾವೇರಿ-ಕಬಿನಿ ಅಬ್ಬರಕ್ಕೆ ತಿ.ನರಸೀಪುರ ತಾಲೂಕಿನ ಐತಿಹಾಸಿಕ ದೇವಸ್ಥಾನದ ಬಾಗಿಲು ಬಂದ್ ಮಾಡಿದ್ದು, ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.

ಕಾವೇರಿ-ಕಬಿನಿ ಅಬ್ಬರಕ್ಕೆ ತಿ‌‌. ನರಸೀಪುರ ದೇವಸ್ಥಾನ ಬಾಗಿಲು ಬಂದ್

ಕೆಆರ್​ಎಸ್ ಹಾಗೂ ಕಬಿನಿಯಿಂದ 1.30 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿರುವ ಹಿನ್ನೆಲೆ ತಿ. ನರಸೀಪುರ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಜನತೆಯಲ್ಲಿ ಆತಂಕ ಶುರುವಾಗಿದೆ.

ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಮೆಟ್ಟಿಲುಗಳು ನೀರಿನಲ್ಲಿ ಮುಳುಗಡೆಯಾಗಿವೆ. ದೇವಸ್ಥಾನದ ಒಳಗಡೆ ಮತ್ತು ಮೆಟ್ಟಿಲುಗಳ ಬಳಿ ಸಾರ್ವಜನಿಕರು ಮತ್ತು ಪ್ರವಾಸಿಗರು ಆಗಮಿಸುವ ಹಿನ್ನೆಲೆ ದೇವಸ್ಥಾನದ ಮುಖ್ಯದ್ವಾರವನ್ನು ತಾಲೂಕು ಆಡಳಿತ ಬಂದ್ ಮಾಡಿದೆ.

ತಾಲೂಕು ಆಡಳಿತ ನಿರ್ಧಾರಕ್ಕೆ ಕ್ಯಾರೇ ಎನ್ನದ ಜನರು, ಮೆಟ್ಟಿಲುಗಳ ಬಳಿಯೇ ಬಟ್ಟೆ ಒಗೆಯುವುದನ್ನು ಮುಂದುವರೆಸಿದ್ದಾರೆ. ಇನ್ನೂ ಕೆಲವು ಮಂದಿ ನದಿ ಪ್ರವಾಹ ವೀಕ್ಷಿಸಲು ಆಗಮಿಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ.

ABOUT THE AUTHOR

...view details