ಕರ್ನಾಟಕ

karnataka

By

Published : Apr 1, 2020, 5:44 PM IST

ETV Bharat / state

ನಂಜನಗೂಡಿನ ಜ್ಯುಬಿಲೆಂಟ್‌ ಕಾರ್ಖಾನೆಯ ಎಲ್ಲಾ ಕಾರ್ಮಿಕರಿಗೆ ಕ್ವಾರಂಟೈನ್‌..

ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೂಕು ಆಡಳಿತ ಎಲ್ಲಾ ರೀತಿಯ ಕ್ರಮಕೈಗೊಳ್ಳಬೇಕು. ಜನರು ಅನಗತ್ಯ ಹೊರಬರದಂತೆ ತಿಳಿಸಬೇಕು. ಜನರಿಗೆ ಸಮಸ್ಯೆಯಾಗದ ರೀತಿ ವರ್ತಿಸಬೇಕು ಎಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಗಳಿಗೆ ಸೂಚನೆ ನೀಡಿದ್ದಾರೆ.

V. Somanna who received the information about the corona infected in mysuru
ಕೊರೊನಾ ಭೀತಿ: ಮೈಸೂರಿನ ಸೋಂಕಿತರ ಕುರಿತು ಮಾಹಿತಿ ಪಡೆದ ವಿ.ಸೋಮಣ್ಣ

ಮೈಸೂರು :ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ಕೊರೊನಾ ಪ್ರಕರಣ ಕಂಡು ಬರುತ್ತಿರುವ ಹಿನ್ನೆಲೆ ಸಚಿವ ವಿ.ಸೋಮಣ್ಣ ಕಡಕೊಳದಲ್ಲಿ ಅಧಿಕಾರಗಳ ಸಭೆ ನಡೆಸಿದರು.

ಮೈಸೂರಿನಲ್ಲಿ ಸೋಂಕಿತರ ಕುರಿತು ಮಾಹಿತಿ ಪಡೆದ ಸಚಿವ ವಿ.ಸೋಮಣ್ಣ..

ಮೈಸೂರು ಜಿಲ್ಲೆಯ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಔಷಧಿ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಮೊದಲ ಪಾಸಿಟಿವ್ ಕೊರೊನಾ ಪ್ರಕರಣದಿಂದ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 14 ಜನರಿಗೂ ಸೋಂಕು ತಗುಲಿದೆ. ಇದರಿಂದಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 1458 ನೌಕರರನ್ನೂ ಕ್ವಾರಂಟೈನ್​ನಲ್ಲಿರಿಸಲಾಗಿದೆ.

ಅದರಲ್ಲಿ 761 ನಂಜನಗೂಡಿನವರು, 697 ಇತರ ಭಾಗದ ನೌಕರರಾಗಿದ್ದಾರೆ. ಅವರನೆಲ್ಲಾ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಯಾವುದೇ ವ್ಯಕ್ತಿ ಬರದಂತೆ ಪೊಲೀಸ್​ ಕಾವಲು ಹಾಕಲಾಗಿದೆ ಅಂತಾ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಲಾಕ್​ಡೌನ್ ಹಿನ್ನೆಲೆ ಯಾರೊಬ್ಬರೂ ಹಸಿವಿನಿಂದರಬಾರದು. ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೂಕು ಆಡಳಿತ ಎಲ್ಲಾ ರೀತಿಯ ಕ್ರಮಕೈಗೊಳ್ಳಬೇಕು. ಜನರು ಅನಗತ್ಯ ಹೊರಬರದಂತೆ ತಿಳಿಸಬೇಕು. ಜನರಿಗೆ ಸಮಸ್ಯೆಯಾಗದ ರೀತಿ ವರ್ತಿಸಬೇಕು ಎಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಗಳಿಗೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details