ಕರ್ನಾಟಕ

karnataka

ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ

By

Published : Oct 7, 2022, 3:43 PM IST

Updated : Oct 7, 2022, 5:10 PM IST

ಅರಮನೆ ಆವರಣದ ಮುಂಭಾಗದಲ್ಲಿ ದಸರಾದ ಅಭಿಮನ್ಯು ನೇತೃತ್ವದ 12 ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಎಲ್ಲ ಆನೆಗಳಿಗೂ ಹೂವಿನ ಅಲಂಕಾರ ಮಾಡಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ
ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಡಿಸಿಎಫ್ ಕರಿಕಾಳನ್ ಅವರು ಮಾತನಾಡಿದರು

ಇಂದು ಅರಮನೆ ಆವರಣದ ಮುಂಭಾಗದಲ್ಲಿ ದಸರಾದ ಅಭಿಮನ್ಯು ನೇತೃತ್ವದ 12 ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಎಲ್ಲ ಆನೆಗಳಿಗೂ ಹೂವಿನ ಅಲಂಕಾರ ಮಾಡಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ಲಾರಿಯಲ್ಲಿ ಸ್ವಸ್ಥಾನಕ್ಕೆ ತೆರಳುತ್ತಿರುವ ಆನೆ

ಈ ಸಂದರ್ಭದಲ್ಲಿ ಡಿಸಿಎಫ್ ಕರಿಕಾಳನ್ ಮಾತನಾಡಿ, ದಸರಾ ಸುಸಜ್ಜಿತವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ, ನಾನು 6ನೇ ಬಾರಿ ದಸರಾ ಮಾಡುತ್ತಿದ್ದೇನೆ. ಆದರೆ, ಈ ಬಾರಿಯ ದಾಖಲೆಯ ಜನ ದಸರಾದಲ್ಲಿ ಭಾಗವಹಿಸಿದ್ದಾರೆ. ಅದರ ನಡುವೆ ಅಭಿಮನ್ಯು ಜಂಬೂಸವಾರಿ ಹೊತ್ತು ರಾಜ ಗಾಂಭೀರ್ಯದಿಂದ ನಡೆದಿದ್ದು, ನಮಗೆಲ್ಲ ಖುಷಿ ತಂದಿದೆ ಎಂದರು.

ಅರಮನೆ ಆವರಣದ ಎದುರು ಘೀಳಿಡುತ್ತಿರುವ ಅಭಿಮನ್ಯು

ಬೆಳಗಿನ ಜಾವವೇ ತಾಯಿ-ಮಗ ಶಿಬಿರಕ್ಕೆ ಶಿಫ್ಟ್:ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ ರಾಂಪುರ ಶಿಬಿರದ ಆನೆ ಲಕ್ಷ್ಮೀ ಮೈಸೂರಿನ ಅರಮನೆಗೆ ಬಂದಾಗ ಗಂಡು ಮರಿಗೆ ಜನ್ಮ ನೀಡಿದ್ದು, ಆ ಮರಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸೂಚನೆ ಮೇರೆಗೆ ಶ್ರೀದತ್ತಾತ್ರೇಯ ಎಂದು ನಾಮಕರಣ ಮಾಡಲಾಗಿತ್ತು.

ಆನೆ ಲಕ್ಷ್ಮೀ ಹಾಗೂ ಅದರ ಮಗ ದತ್ತಾತ್ರೇಯ

ಈ ತಾಯಿ ಮತ್ತು ಮರಿಯನ್ನು ಇಂದು ಬೆಳಗಿನ ಜಾವವೇ ವೈದ್ಯರ ಸಲಹೆ ಮೇರೆಗೆ ಸುರಕ್ಷಿತವಾಗಿ ರಾಂಪುರ ಶಿಬಿರಕ್ಕೆ ಕಳುಹಿಸಲಾಗಿದ್ದು, ಇದರ ಜೊತೆಗೆ ಚೈತ್ರ ಆನೆಯನ್ನು ಸಹಾ ಜೊತೆಯಲ್ಲಿ ಕಳುಹಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದರು.

ಅರಮನೆ ಎದುರು ನೆರೆದ ಗಜಪಡೆ

ಓದಿ:ಜಂಬೂಸವಾರಿ ಮೆರವಣಿಗೆಯಲ್ಲಿ ಮಹೇಂದ್ರ ಹೆಜ್ಜೆ ಹಾಕುತ್ತಿದ್ದಾಗ ದೇವರ ನೆನೆದೆ: ಮಾವುತ ರಾಜಣ್ಣ ಭಾವುಕ

Last Updated : Oct 7, 2022, 5:10 PM IST

ABOUT THE AUTHOR

...view details