ಕರ್ನಾಟಕ

karnataka

ETV Bharat / state

ಮರು ಸ್ಥಾಪನೆ ಮಾಡಿದ್ರೆ ದೇವರಾಜ ಮಾರುಕಟ್ಟೆ ಇನ್ನೂ 100 ವರ್ಷಗಳವರೆಗೂ ಇರಲಿದೆ: ಯದುವೀರ್​

ದೇವರಾಜ ಮಾರುಕಟ್ಟೆಯನ್ನು ಮರುಸ್ಥಾಪನೆ ಮಾಡಿದರೆ ಇನ್ನೂ 100 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ರಾಜವಂಶಸ್ಥ ಯದುವೀರ್ ಈ ಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

By

Published : Jun 16, 2019, 11:54 AM IST

ದೇವರಾಜ ಮಾರುಕಟ್ಟೆ ಇನ್ನೂ 100 ವರ್ಷಗಳವರೆಗೂ ಇರಲಿದೆ

ಮೈಸೂರು: ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್ ಸಂದರ್ಶನದಲ್ಲಿ ನಗರದ ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿದೆ ಎಂಬ ವರದಿಯ ಹಿನ್ನೆಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ವ್ಯಾಪಾರಸ್ಥರೊಂದಿಗೆ ಮಾರುಕಟ್ಟೆಯನ್ನು ಪರಿಶೀಲನೆ ನಡೆಸಿದ್ರು.

ದೇವರಾಜ ಮಾರುಕಟ್ಟೆ ಇನ್ನೂ 100 ವರ್ಷಗಳವರೆಗೂ ಇರಲಿದೆ

ಇಲ್ಲಿ ಪಾರಂಪರಿಕ ತಜ್ಞರು ಪರಿಶೀಲನೆ ನಡೆಸಿ ಇದನ್ನು ಸರಿಯಾದ ರೀತಿಯಲ್ಲಿ ಸರಿ ಪಡಿಸಿದರೆ ಇನ್ನೂ 100 ವರ್ಷಗಳ ಕಾಲ ಈ ದೇವರಾಜ ಮಾರುಕಟ್ಟೆ ಬಾಳುತ್ತದೆ ಎಂದು ಒಡೆಯರು ತಿಳಿಸಿದ್ರು. ‌ಆದರೆ ಮಹಾನಗರ ಪಾಲಿಕೆಯವರು ಕೋರ್ಟ್ ಆದೇಶದ ಬಗ್ಗೆ ಸರಿಯಾಗಿ ತಿಳಿಸುತ್ತಿಲ್ಲ. ನಮ್ಮ ಕಡೆಯಿಂದ ಸರ್ಕಾರಕ್ಕೆ ಒಂದು ಮನವಿ ಎಂದರೆ ದೇವರಾಜ ಮಾರುಕಟ್ಟೆ ಮೈಸೂರಿನ ಗುರುತು ಇದ್ದಂತೆ. ಅರಮನೆಯ ಸುತ್ತ ಇರುವ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದು. ಅದನ್ನು ಸಂರಕ್ಷಿಸಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ನಾವು ಕೂಡ ಇವರ ಜೊತೆ ಇರುತ್ತೇವೆ.‌ಈ ಕಟ್ಟಡದ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೊ ಆ ನಂತರ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪಾರಂಪರಿಕ ಕಟ್ಟಡಗಳ ಸಮಿತಿಯ ಸದಸ್ಯರು ಇಲ್ಲಿಗೆ ಬಂದು ನೋಡಿದರೆ, ನಾನು ಸಹ ಬರುತ್ತೇನೆ ಇದರ ಬಗ್ಗೆ ತಿಳಿಸಿಕೊಡುತ್ತೇನೆ . ದೇವರಾಜ ಮಾರುಕಟ್ಟೆಯ ನೆಲಸಮದ ಮುಂಚೆ ಪಾರಂಪರಿಕ ಕಟ್ಟಡಗಳ ಸಮಿತಿಯಲ್ಲಿ ಸರಿಯಾದ ವಾಸ್ತುಶಿಲ್ಪಿಗಳು ಇದ್ದರೆ ಇದನ್ನು ನೋಡಲಿ. ಆಮೇಲೆ ಅವರೇ ಈ ಕಟ್ಟಡವನ್ನು ಕೆಡಗುವುದು ಅಥವಾ ಮರು ಸ್ಥಾಪನೆ ಮಾಡಬಹುದಾ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದ್ರು.

For All Latest Updates

ABOUT THE AUTHOR

...view details