ಕರ್ನಾಟಕ

karnataka

By

Published : Aug 3, 2019, 7:10 PM IST

ETV Bharat / state

ಮೊದಲ ಶ್ರಾವಣ ಶನಿವಾರ: ಮೈಸೂರಿನ ದೇಗುಲಗಳಲ್ಲಿ ವಿಶೇಷ ಪೂಜೆ

ಆಷಾಢ ಕಳೆದ ನಂತರ ಬರುವ ಶ್ರಾವಣ ಮಾಸದಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆಯುತ್ತವೆ. ಇಂದು ಮೊದಲ‌ ಶ್ರಾವಣ ಶನಿವಾರದ ಪ್ರಯುಕ್ತ ಮೈಸೂರು ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೇರವೇರಿದವು.

ಮೈಸೂರಿನ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು: ಮೊದಲ ಶ್ರಾವಣ ಶನಿವಾರದ ನಿಮಿತ್ತ ವೆಂಕಟೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಭಕ್ತರು ಇಂದು ಬೆಳಿಗ್ಗೆಯಿಂದಲೇ ದೇವರ ದರ್ಶನ ಪಡೆದರು.

ಆಷಾಢ ಕಳೆದ ನಂತರ ಬರುವ ಶ್ರಾವಣ ಮಾಸ, ಹಬ್ಬಗಳನ್ನು ತರುವ ತಿಂಗಳಾಗಿದ್ದು, ಈ ಮಾಸದಲ್ಲಿ ಶುಭ ಕಾರ್ಯಗಳು ಹೆಚ್ಚು ಜರುಗುತ್ತವೆ. ಇಂದು ಮೊದಲ‌ ಶ್ರಾವಣ ಶನಿವಾರದ ಪ್ರಯುಕ್ತ ನಗರದ ಪ್ರಸಿದ್ಧ ಶ್ರೀನಿವಾಸ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಮೈಸೂರಿನ ದೇವಾಲಯದಲ್ಲಿ ವಿಶೇಷ ಪೂಜೆ

ನಸುಕಿನ ಜಾವ 3 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ವೆಂಕಟೇಶನ ದರ್ಶನ ಪಡೆದರು. ಮೊದಲ ಶ್ರಾವಣ ಶನಿವಾರದ ನಿಮಿತ್ತ ದೇವಾಲಯದ ಒಳಗೆ ಮತ್ತು ಹೊರಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ABOUT THE AUTHOR

...view details