ಮೈಸೂರು: ಲಾಕ್ಡೌನ್ ಸಂದರ್ಭದಲ್ಲಿ ವ್ಯಾಪಾರದಲ್ಲಿ ಉಂಟಾದ ನಷ್ಟದಿಂದ ಮನನೊಂದು ವ್ಯಾಪಾರಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜೀವ್ ನಗರದಲ್ಲಿ ನಡೆದಿದೆ.
ಲಾಕ್ಡೌನ್ನಿಂದ ನಷ್ಟದ ಮೇಲೆ ನಷ್ಟ.. ಆತ್ಮಹತ್ಯೆಗೆ ಶರಣಾದ ವ್ಯಾಪಾರಿ
ಸಾಲ ಯಾವತ್ತಲೂ ಶೂಲದಂತೆಯೇ.. ಆದರೂ ಇಲ್ಲೊಬ್ಬ ವ್ಯಾಪಾರಿ ಸಾಲ ಮಾಡಿ ವ್ಯಾಪಾರವನ್ನೇನೋ ಶುರು ಮಾಡಿದ್ದ. ಆದರೆ, ಲಾಕ್ಡೌನ್ ಆತ ನಂಬಿಕೆ, ನಿರೀಕ್ಷೆಗಳಿಗೆಲ್ಲ ಕೊಳ್ಳಿ ಇಟ್ಟಿತ್ತು. ಪರಿಣಾಮ..
Udayagiri police station
ಅಕ್ಬರ್ ಹುಸೇನ್ (37) ಎಂಬಾತ ನೇಣಿಗೆ ಶರಣಾದವರು. ಈತ ರಾಜೀವ್ ನಗರದ ನಿವಾಸಿಯಾಗಿದ್ದು, ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಿಯಾಗಿದ್ದ. ಸಾಕಷ್ಟು ಕಡೆ ಸಾಲ ಮಾಡಿಕೊಂಡಿದ್ದನಂತೆ. ಕೊರೊನಾ ಲಾಕ್ಡೌನ್ ಹಿನ್ನೆಲೆ ಸರಿಯಾದ ವ್ಯಾಪಾರ ಇಲ್ಲದೆ ಸಾಲ ತೀರಿಸಲಾಗದೆ ಮನನೊಂದು ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.