ಕರ್ನಾಟಕ

karnataka

By

Published : Nov 30, 2022, 11:42 AM IST

ETV Bharat / state

ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪರಿಗೆ ಕೊಲೆ ಬೆದರಿಕೆ: ಪೊಲೀಸರಿಗೆ​ ದೂರು

ಟಿಪ್ಪು ನಿಜಕನಸುಗಳು ಎಂಬ ನಾಟಕದಲ್ಲಿ ಸಕ್ರಿಯನಾಗಿರುವ ನನಗೆ ಜೀವ ಭಯ ಇದೆ ಎಂದು ಅಡ್ಡಂಡ ಸಿ ಕಾರ್ಯಪ್ಪ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಂಗಾಯಣ ನಿರ್ದೇಶಕರಿಗೆ ಕೊಲೆ ಬೆದರಿಕೆ: ಪೊಲೀಸ್​ ದೂರು ನೀಡಿದ ಅಡ್ಡಂಡ ಸಿ ಕಾರ್ಯಪ್ಪ
death-threat-to-rangayana-director-addanda-c-kariappa-filed-a-police-complaint

ಮೈಸೂರು: ಕೊಲೆ ಬೆದರಿಕೆ ಪತ್ರ ಬರುತ್ತಿದೆ. ಹೀಗಾಗಿ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಕೋರಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟಿಪ್ಪು ನಿಜಕನಸುಗಳು ಎಂಬ ನಾಟಕದಲ್ಲಿ ಸಕ್ರಿಯನಾಗಿರುವ ನನಗೆ ಜೀವ ಭಯ ಇದೆ. ನವೆಂಬರ್‌ 28 ರಂದು ಶಿವಮೊಗ್ಗದ ಶ್ರೀರಾಮ ಕೋಟೆ ಎಂಬ ವಿಳಾಸದಿಂದ ಪತ್ರವೊಂದು ಬಂದಿದೆ. ಈ ಪತ್ರದಲ್ಲಿ ನೀವೀಗ ಕೊಲೆಯಾಗುವ ಹಾಗೂ ಸಾಯುವ ಹಂತದಲ್ಲಿದ್ದು, ನೀವು ನಂಬಿರುವ ದೇವರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ ಎಂದು ಬೆದರಿಸಿದ್ದಾರೆ. ಇದರ ಜೊತೆಗೆ ಜಾಲತಾಣಗಳಲ್ಲಿಯೂ ಬೆದರಿಕೆಯ ವಿಡಿಯೋ ಸಹ ಹಾಕಲಾಗಿದೆ. ಹೀಗಾಗಿ ಪೊಲೀಸ್​ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಚ್ಚುಕಟ್ಟಾಗಿ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಮೆಚ್ಚುಗೆ ಗಳಿಸಿದ ಮಹಿಳಾ ಪೊಲೀಸ್ ಅಧಿಕಾರಿ

ABOUT THE AUTHOR

...view details