ಮೈಸೂರು:ಪ್ರತಿಯೊಂದು ಕೆಲಸಕ್ಕೂ ಈಗ ಆಧಾರ್ ಸಂಖ್ಯೆ ಕಡ್ಡಾಯ. ಇಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್ ಹೊಸದಾಗಿ ಮಾಡಿಸಲು ಅಥವಾ ತಿದ್ದುಪಡಿಗೆ ಸಾಂಸ್ಕೃತಿಕ ನಗರಿಯಲ್ಲಿ ಆಧಾರ್ ಕೇಂದ್ರಗಳ ಕೊರತೆ ಇಲ್ಲ. ನಗರದ ಕರ್ನಾಟಕ ಒನ್ ಕೇಂದ್ರ, ಸರ್ಕಾರಿ ಬ್ಯಾಂಕ್ ಹಾಗೂ ವಿಜಯನಗರದಲ್ಲಿ ಹೊಸದಾಗಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿದೆ.
ಮೈಸೂರಲ್ಲಿ ಶುರುವಾಯ್ತು ಹೊಸ ಆಧಾರ್ ನೋಂದಣಿ ಕೇಂದ್ರ: ಎಲ್ಲಿ ಗೊತ್ತೇ?
ಮೈಸೂರು ನಗರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಗಾಗಿ ನೂತನ ಕರ್ನಾಟಕ ಒನ್ ಕೇಂದ್ರ, ಸರ್ಕಾರಿ ಬ್ಯಾಂಕ್ ಹಾಗೂ ವಿಜಯನಗರದಲ್ಲಿ ಆಧಾರ್ ನೋಂದಣಿ ಕೇಂದ್ರ ಸ್ಥಾಪಿಸಲಾಗಿದೆ.
ಈಗಾಗಲೇ ಕಾಲೇಜು ಆರಂಭವಾಗಿದ್ದು, ಕೆಲವು ವಿದ್ಯಾರ್ಥಿಗಳ ಹೆಸರು ಹಾಗೂ ಬೇರೆ ರೀತಿಯ ಮಾಹಿತಿ ಆಧಾರ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಿಸುತ್ತಿದ್ದಾರೆ. ಇನ್ನು ರೇಷನ್ ಕಾರ್ಡ್, ಪಿಂಚಣಿ, ಇತರೆ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕಾಗಿರುವುದರಿಂದ ವೃದ್ಧರು ಸಹ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳಿಗೆ ಬಂದು ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಇಂದು ಕರ್ನಾಟಕ ಒನ್ ಕೇಂದ್ರಕ್ಕೆ ತಮ್ಮ ಮಗನ ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದ ಗಣಪತಿ ಎಂಬುವವರು ಈಟಿವಿ ಭಾರತ್ ಜತೆ ಮಾತನಾಡಿ, ನಗರದಲ್ಲಿ ಅನೇಕ ಕಡೆ ಆಧಾರ್ ತಿದ್ದುಪಡಿ ಸೇವೆ ಇರುವುದರಿಂದ ಇಲ್ಲಿ ಯಾವುದೇ ತೊಂದರೆ ಇಲ್ಲ. ಬಂದ ಅರ್ಧ ಗಂಟೆಯಲ್ಲಿಯೇ ನಮ್ಮ ಕೆಲಸ ಮಾಡಿಸಿಕೊಂಡು ಹೋಗಬಹುದಾಗಿದೆ ಎಂದರು.