ಕರ್ನಾಟಕ

karnataka

By

Published : Aug 9, 2019, 2:08 AM IST

ETV Bharat / state

ಕಬಿನಿಯಿಂದ 90 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ: ಮೈಸೂರು-ಊಟಿ ರಸ್ತೆ ಬಂದ್

ಕಬಿನಿ ಜಲಾಶಯದಿಂದ 90ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡುತ್ತಿದ್ದು, ನಂಜನಗೂಡು ರಸ್ತೆಯಲ್ಲಿರುವ ಕಪಿಲಾ ಸೇತುವೆ ತುಂಬಿ ಹರಿಯುತ್ತಿರುವುದರಿಂದ ನಂಜನಗೂಡು-ಊಟಿ ರಸ್ತೆಯನ್ನು ಬಂದ್ ಮಾಡಲಾಗಿದೆ.

ಕಬಿನಿಯಿಂದ 90 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಮೈಸೂರು-ಊಟಿ ರಸ್ತೆ ಬಂದ್

ಮೈಸೂರು: ಕಬಿನಿ ಜಲಾಶಯದಿಂದ 90ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡುತ್ತಿರುವುದರಿಂದ ನಂಜನಗೂಡು ರಸ್ತೆಯಲ್ಲಿರುವ ಕಪಿಲಾ ಸೇತುವೆ ತುಂಬಿ ಹರಿಯುತ್ತಿರುವುದರಿಂದ ನಂಜನಗೂಡು-ಊಟಿ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕಬಿನಿಯಿಂದ 90 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಮೈಸೂರು-ಊಟಿ ರಸ್ತೆ ಬಂದ್

ಮಾರ್ಗಗಳ ಬದಲಾವಣೆ:
● ಕೇರಳಾ ರಾಜ್ಯದ ವಯನಾಡು ಜಿಲ್ಲೆಯ ಕಪಿಲಾ ನದಿಯ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಒಳ ಹರಿವು ಜಾಸ್ತಿಯಾಗಿದ್ದು, ಹಾಲಿ 90000 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ ಆದ್ದರಿಂದ ನದಿ ಪಾತ್ರದಲ್ಲಿರುವ ತಗ್ಗು ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

● ಹೆಚ್.ಡಿ ಕೋಟೆ ತಾಲೂಕು: (ಕಪಿಲಾ ನದಿ ಪಾತ್ರ)
1) ಸರಗೂರು – ತಿಂಡಸೋಗೆ ರಸ್ತೆಯಲ್ಲಿನ ಸೇತುವೆ ಕುಸಿತವಾಗಿರುವುದರಿಂದ ಈ ಮಾರ್ಗವನ್ನು ಮುಚ್ಚಲಾಗಿದ್ದು, ಶಿರಮಳ್ಳಿ – ಕೊಲ್ಲೇಗೌಡನಹಳ್ಳಿ - ಹ್ಯಾಂಡ್ ಪೋಸ್ಟ್ ಮಾರ್ಗ ಬದಲಾವಣೆ ಮಾಡಲಾಗಿದೆ.
2) ಡಿ.ಬಿ ಕುಪ್ಪೆ, ಮಚ್ಚೂರು, ಹೊಸೂರು, ಮಚ್ಚೂರು ಹಾಡಿಗಳಿಗೆ ನೀರು ನುಗ್ಗುವ ಸಾದ್ಯತೆ ಇರುವುದರಿಂದ ಡಿ.ಬಿ ಕುಪ್ಪೆ ಮತ್ತು ಮಚ್ಚೂರು ಗ್ರಾಮಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 130 ಜನ ಸಂತ್ರಸ್ತರು ಇರುತ್ತಾರೆ.

● ನಂಜನಗೂಡು: (ಕಪಿಲಾ ನದಿ ಪಾತ್ರ)
1) ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಜನಗೂಡಿನ ಸಮೀಪ ಮಲ್ಲನ ಮೂಲೆ ತಿರುವಿನಲ್ಲಿ ಕಬಿನಿ ನದಿಯ ನೀರು ಹರಿಯುತ್ತಿರುವುದರಿಂದ ಈ ಮಾರ್ಗವನ್ನು ಮುಚ್ಚಲಾಗಿದ್ದು, ಬದಲಿ ವ್ಯವಸ್ಥೆಯಾಗಿ ಮೈಸೂರಿನಿಂದ: ತಾಂಡವಪುರ- ಬಸವನಪುರ- ಹೆಜ್ಜಿಗೆ- ನಂಜನಗೂಡು (ಔಟಿe ತಿಚಿಥಿ) ನಂಜನಗೂಡಿನಿಂದ : ನಂಜನಗೂಡು -ಹುಲ್ಲಹಳ್ಳಿ – ರಾಂಪುರ- ಉದ್ಬೂರು ಮುಖಾಂತರ ಮೈಸೂರು (ಊಟಿ ತಿಚಿಥಿ) ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.
2) ನಂಜನಗೂಡು ಟೌನ್ ನಲ್ಲಿನ ಹಳ್ಳದಕೇರಿ, ತೋಪಿನ ಬೀದಿ ಮುಂತಾದ ತಗ್ಗುಪ್ರದೇಶಗಳಿಗೆ ನೀರು ನುಗ್ಗುವುದರಿಂದ ನಂಜನಗೂಡು ಟೌನ್ ನಲ್ಲಿರುವ ಗಿರಿಜಾ ಕಲ್ಯಾಣ ಭವನದಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ. ಆದರೆ ದಿನಾಂಕ: 08.08.2019 ರ ಸಂಜೆಯವರೆವಿಗೆ ಯಾರೂ ಪರಿಹಾರ ಕೇಂದ್ರಗಳಿಗೆ ಬಂದಿರುವುದಿಲ್ಲ.
3) ಬೊಕ್ಕಹಳ್ಳಿ ಗ್ರಾಮದ ತಗ್ಗು ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಆ ಗ್ರಾಮದ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪನೆ ಮಾಡಲಾಗಿರುತ್ತದೆ. ಆದರೆ ದಿನಾಂಕ: 08.08.2019 ರ ಸಂಜೆಯವರಿವಿಗೆ ಯಾಗೂ ಕೇಂದ್ರಗಳಿಗೆ ಬಂದಿರುವುದಿಲ್ಲ.

● ಪಿರಿಯಾಪಟ್ಟಣ: (ಕಾವೇರಿ ನದಿ ಪಾತ್ರ)
1) ಕೊಪ್ಪ – ಗೋಲ್ಡನ್ ಟೆಂಪಲ್ ರಸ್ತೆಯಲ್ಲಿ ನೀರು ಹೆಚ್ಚಾಗಬಹುದಾಗಿದ್ದು ಬದಲಿಯಾಗಿ ಚಿಕ್ಕೊಸೂರು ರಸ್ತೆಯ ಮೂಲಕ ಮಾರ್ಗ ಬದಲಾವಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
2) ಕಣಗಲ್ - ಪಿರಿಯಾಪಟ್ಟಣ ರಸ್ತೆ ಬದಲಿಗೆ ಸೂಳೆಕೋಟೆ – ಮನ್ನಾಪುರ ರಸ್ತೆಯನ್ನು ಬಳಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಕಂಡುಬಂದಿರುವುದಿಲ್ಲ.

● ಹುಣಸೂರು: (ಲಕ್ಷ್ಮಣ ತೀರ್ಥ ನದಿ ಪಾತ್ರ)
1) ಕಾನನ ಹೊಸಹಳ್ಳಿ ಗ್ರಾಮದಲ್ಲಿ ನೀರು ನುಗ್ಗಿರುವುದರಿಂದ ಸುಮಾರು 30 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರ ಸ್ಥಾಪನೆಯಾಗಿದ್ದರೂ ಸಹಾ ಸಂತ್ರಸ್ಥರು, ತಮ್ಮಗಳ ಸಂಬಂಧಿಕರ ಮನೆಗೆ ತೆರಳಿರುತ್ತಾರೆ.
2) ಹುಣಸೂರು - ಹನಗೋಡು ರಸ್ತೆ ಮುಚ್ಚಲಾಗಿದ್ದು, ಹೆಮ್ಮಿಗೆ ಮೂಲಕ ಮಾರ್ಗ ಬದಲಾವಣೆ ಮಾಡಲಾಗಿದೆ.
3) ಹನಗೋಡು – ಕಿರಂಗೂರು ಸೇತುವೆ ಮುಳುಗಡೆಯಾಗಿರುವುದರಿಂದ ಈ ರಸ್ತೆಯನ್ನು ಮುಚ್ಚಲಾಗಿದ್ದು ಪಕ್ಕದಲ್ಲೇ ಇರುವ ರಸ್ತೆಯನ್ನು ಮಾರ್ಗಬದಲಾವಣೆ ಮಾಡಲಾಗಿದೆ.

ದಿನಾಂಕ: 07.08.2019 ರಿಂದ ಈವರೆವಿಗೆ ಜಿಲ್ಲೆಯಲಿ ಒಟ್ಟು: 160 ಮನೆಗಳು ಹಾನಿಯಾಗಿರುವುದಾಗಿ ವರದಿಯಾಗಿದ್ದು, ಪರಿಹಾರ ತುರ್ತಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
1) ಜಿಲ್ಲಾಧಿಕಾರಗಳ ಕಚೇರಿ: 0821 – 2423800 /1077
2) ತಾಲ್ಲೂಕು ಕಚೇರಿ ಮೈಸೂರು: 0821—2414812
3) ನಂಜನಗೂಡು ತಾಲ್ಲೂಕು: 08221- 223108
4) ತಿ.ನರಸೀಪುರ ತಾಲ್ಲೂಕು: 08227- 260210 / 631911901
5) ಹುಣಸೂರು ತಾಲ್ಲೂಕು: 08222- 252040
6) ಕೆ.ಆರ್.ನಗರ ತಾಲ್ಲೂಕು: 08223- 262371
7) ಹೆಚ್.ಡಿ ಕೋಟೆ ತಾಲ್ಲೂಕು: 08228- 255325
8) ಪಿರಿಯಾಪಟ್ಟಣ ತಾಲ್ಲೂಕು: 08223- 274007
9) ಚೆಸ್ಕಾಂ ಮೈಸೂರು: 0821- 2461030/1912

ABOUT THE AUTHOR

...view details