ಕರ್ನಾಟಕ

karnataka

ETV Bharat / state

ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಪ್ರವಾಸಿಗರ ದಂಡು.. ದಸರಾದ 10 ದಿನದಲ್ಲಿ 1.5 ಕೋಟಿ ಸಂಗ್ರಹ

ದಸರಾ ಹಿನ್ನೆಲೆ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ 10 ದಿನಗಳಲ್ಲಿ 1.55 ಲಕ್ಷ ಜನ ಪ್ರವಾಸಿಗರು ಭೇಟಿ ನೀಡಿದ್ದು, 153.33 ಲಕ್ಷ ರೂ ಹಣ ಸಂಗ್ರಹವಾಗಿದೆ.

By

Published : Oct 10, 2022, 9:01 PM IST

KN_MYS_0
ಶ್ರೀಚಾಮರಾಜೇಂದ್ರ ಮೃಗಾಲಯ

ಮೈಸೂರು: ವಿಜಯದಶಮಿಯಂದು ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ 36,420 ಪ್ರವಾಸಿಗರು ಭೇಟಿ ಕೊಟ್ಟಿದ್ದು, ಅಂದು 35,92,160 ರೂ.ಆದಾಯ ಸಂಗ್ರಹವಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಆಯುಧ ಪೂಜೆ ಹಾಗೂ ದಸರಾ ಹಬ್ಬದ 10 ದಿನಗಳ ಅವಧಿಯಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ವಿವರ ಹೀಗಿದೆ. 2018ರಲ್ಲಿ 10 ದಿನಗಳ ಅವಧಿಯಲ್ಲಿ 1.53 ಲಕ್ಷ ಮಂದಿ ವೀಕ್ಷಣೆ, 10 ದಿನಗಳಲ್ಲಿ 105.64 ಲಕ್ಷ ರೂ.ಸಂಗ್ರಹವಾಗಿದೆ. ಆಯುಧಪೂಜೆ ದಿನ ವೀಕ್ಷಕರ ಸಂಖ್ಯೆ 22,398, ಸಂಗ್ರಹವಾದ ಹಣ 17.74 ಲಕ್ಷ ರೂ. ವಿಜಯ ದಶಮಿ ದಿನ ವೀಕ್ಷಕರ ಸಂಖ್ಯೆ 32,301, ಸಂಗ್ರಹವಾದ ಹಣ 25.40 ಲಕ್ಷ ರೂ.

ಶ್ರೀಚಾಮರಾಜೇಂದ್ರ ಮೃಗಾಲಯ

2019ರಲ್ಲಿ 10 ದಿನಗಳಲ್ಲಿ ವೀಕ್ಷಕರ ಸಂಖ್ಯೆ 1.65 ಲಕ್ಷ , 10 ದಿನಗಳಲ್ಲಿ ಸಂಗ್ರಹವಾದ ಹಣ 159.76 ಲಕ್ಷ ರೂ. ಆಯುಧ ಪೂಜೆ ವೀಕ್ಷಕರ ಸಂಖ್ಯೆ 30,273, ಸಂಗ್ರಹವಾದ ಹಣ 29.77 ಲಕ್ಷ ರೂ. ವಿಜಯ ದಶಮಿ ದಿನ ವೀಕ್ಷಕರ ಸಂಖ್ಯೆ 28,386, ಸಂಗ್ರಹವಾದ ಹಣ 28.28 ಲಕ್ಷ ರೂ. 2020ರಲ್ಲಿ 10 ದಿನಗಳಲ್ಲಿ ವೀಕ್ಷಕರ ಸಂಖ್ಯೆ 20ಸಾವಿರ, 10 ದಿನಗಳಲ್ಲಿ ಸಂಗ್ರಹವಾದ ಹಣ 19.56 ಲಕ್ಷ ರೂ. ಆಯುಧ ಪೂಜೆ ಭೇಟಿ ನೀಡಿದ ಪ್ರವಾಸಿಗರು 3,534, ಸಂಗ್ರಹವಾದ ಹಣ 3.54 ಲಕ್ಷ ರೂ. ವಿಜಯ ದಶಮಿ ದಿನ ವೀಕ್ಷಕರ ಸಂಖ್ಯೆ 7,264, ಸಂಗ್ರಹವಾದ ಹಣ 7.33 ಲಕ್ಷ ರೂ.

2021ರಲ್ಲಿ 10 ದಿನಗಳಲ್ಲಿ ವೀಕ್ಷಕರ ಸಂಖ್ಯೆ 75ಸಾವಿರ, 10 ದಿನಗಳಲ್ಲಿ ಸಂಗ್ರಹವಾದ ಹಣ 77.63 ಲಕ್ಷ ರೂ. ಆಯುಧ ಪೂಜೆ ದಿನ ವೀಕ್ಷಕರ ಸಂಖ್ಯೆ 9,033, ಸಂಗ್ರಹವಾದ ಹಣ 9.29 ಲಕ್ಷ ರೂ. ವಿಜಯದಶಮಿ ದಿನ ವೀಕ್ಷಕರ ಸಂಖ್ಯೆ 27,093, ಸಂಗ್ರಹವಾದ ಹಣ 26.67 ಲಕ್ಷ ರೂ.

2022ರಲ್ಲಿ 10ದಿನಗಳಲ್ಲಿ 1.55 ಲಕ್ಷ ಜನರಿಂದ ವೀಕ್ಷಣೆ, 10 ದಿನಗಳಲ್ಲಿ ಸಂಗ್ರಹವಾದ ಹಣ 153.33 ಲಕ್ಷ ರೂ. ಆಯುಧಪೂಜೆ ದಿನ ವೀಕ್ಷಕರ ಸಂಖ್ಯೆ 23,350 ಸಂಗ್ರಹವಾದ ಹಣ 23.16 ಲಕ್ಷ ರೂ. ವಿಜಯದಶಮಿ ದಿನ ವೀಕ್ಷಕರ ಸಂಖ್ಯೆ 36,420, ಸಂಗ್ರಹವಾದ ಹಣ 35.92 ಲಕ್ಷ ರೂ. ಎಂದು ಮೃಗಾಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಾವಿರಾರು ಕೋಟಿ ಒಡೆಯ, ಹತ್ತಾರು ಟನ್​ ಚಿನ್ನದ ಮಾಲೀಕ.. ತಿರುಪತಿ ತಿಮ್ಮಪ್ಪನ ಆಸ್ತಿ ಬಹಿರಂಗ

ABOUT THE AUTHOR

...view details