ಕರ್ನಾಟಕ

karnataka

By

Published : Jul 26, 2019, 8:42 PM IST

ETV Bharat / state

ಯಡಿಯೂರಪ್ಪ ತವರಲ್ಲಿ ಸಂಭ್ರಮ, ಕುಟುಂಬದಲ್ಲಿ ಸಡಗರ

ನೂತನ ಮುಖ್ಯಮಂತ್ರಿಯಾಗಿ ಬಿ. ಎಸ್​. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಾಜ್ಯದೆಲ್ಲೆಡೆ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ; ತವರಿನಲ್ಲಿ ಸಂಭ್ರಮ

ಮಂಡ್ಯ:ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ರಾಜ್ಯದ 26ನೇ ಸಿಎಂ ಆಗಿ ಪ್ರಮಾಣ ಕೈಗೊಳ್ಳುತ್ತಿದ್ದಂತೆ ಅವರ ತವರೂರಿನಲ್ಲಿ ಸಂಭ್ರಮ, ಸಡಗರದ ವಾತಾವರಣವಿತ್ತು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಹಿ ಹಂಚಿ ಕುಣಿದು ಖುಷಿಪಟ್ಟರು. ಇದೇ ವೇಳೆ

ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ; ತವರಿನಲ್ಲಿ ಸಂಭ್ರಮ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಯಡಿಯೂರಪ್ಪನವರ ಹುಟ್ಟೂರು. ಅವರ ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ, ಗೋಗಲಮ್ಮ ಹಾಗೂ ಅಕ್ಕಯ್ಯಮ್ಮರ ನೆಲೆಯೂ ಇಲ್ಲಿಯೇ. ಗ್ರಾಮಸ್ಥರು ಗ್ರಾಮ ದೇವತೆ ಗೋಗಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ್ರು.

ಯಡಿಯೂರಪ್ಪರ ಜನ್ಮಸ್ಥಳವಾದ ಬೂಕನಕೆರೆಯಲ್ಲಿ ಅವರ ಅಣ್ಣ ಮತ್ತು ಅತ್ತಿಗೆ ವಾಸವಾಗಿದ್ದಾರೆ. ಮನೆಗೆ ಹಿರಿಯರೇ ಯಡಿಯೂರಪ್ಪನವರ ಅತ್ತಿಗೆ. ಯಡಿಯೂರಪ್ಪನವರು ಸಿಎಂ ಆದಾಗಲೆಲ್ಲಾ ಅತೀವ ಸಂತಸಪಟ್ಟವರು ಈ ಹಿರಿಯ ಜೀವ. ಇಂದೂ ಕೂಡ ಸಡಗರದಿಂದ ತಮ್ಮ ಮೈದುನನ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಟಿವಿಯಲ್ಲೇ ನೋಡಿ ಆನಂದಿಸಿದ್ರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ಮೇಲಾಟದಿಂದ ನಾನು ಸರಿಯಾಗಿ ಊಟ ಮಾಡಿರಲಿಲ್ಲ. ಇಂದು ಪ್ರಮಾಣ ವಚನ ಸ್ವೀಕಾರ ವಿಷಯ ತಿಳಿದು ನೆಮ್ಮದಿಯಾಗಿ ಆಹಾರ ಸೇವಿಸಿದ್ದೇನೆ. ಅವರು ರಾಜ್ಯಕ್ಕೆ ಉತ್ತಮ ಆಡಳಿತ ನೀಡುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವದಿಸಿದರು.

For All Latest Updates

TAGGED:

ABOUT THE AUTHOR

...view details