ಕರ್ನಾಟಕ

karnataka

By

Published : May 9, 2020, 2:12 PM IST

Updated : May 9, 2020, 6:36 PM IST

ETV Bharat / state

ಹನುಮನಾಳದಲ್ಲಿ ತುರ್ತು ಸಭೆ ನಡೆಸಿದ ತಹಶೀಲ್ದಾರ್​​: ಸ್ವಯಂ ನಿರ್ಬಂಧಕ್ಕೆ ಗ್ರಾಮಸ್ಥರ ಒಪ್ಪಿಗೆ

ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್​ ಆದೇಶದ ಅನ್ವಯ ಶುಕ್ರವಾರ ತಹಶೀಲ್ದಾರ್​​ ಎಂ.ಸಿದ್ದೇಶ ಸ್ಥಳೀಯ ಹನುಮಾಳ ಗ್ರಾ.ಪಂ.ನಲ್ಲಿ ತುರ್ತು ಸಭೆ ನಡೆಸಿದರು.

emergency meeting
ತುರ್ತು ಸಭೆ

ಕುಷ್ಟಗಿ (ಕೊಪ್ಪಳ): ತಾಲೂಕಿನ ಹನುಮನಾಳಕ್ಕೆ ಬಂದು ಹೋಗಿದ್ದ ಕೊರೊನಾ ಸೋಂಕಿತರ ಸಿಡಿಆರ್ ಹಾಗೂ ಟ್ರಾವೆಲಿಂಗ್ ಹಿಸ್ಟರಿಯನ್ನು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ಬೆನ್ನಲ್ಲೆ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್​ ಆದೇಶದ ಅನ್ವಯ ಶುಕ್ರವಾರ ತಹಶೀಲ್ದಾರ್​​ ಎಂ.ಸಿದ್ದೇಶ ಹನುಮನಾಳ ಗ್ರಾ.ಪಂ.ಯಲ್ಲಿ ತುರ್ತು ಸಭೆ ನಡೆಸಿದರು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಢಾಣಕ ಶಿರೂರು ಗ್ರಾಮದ ಸೋಂಕಿತರಾದ 681 ಹಾಗೂ 684 ಇವರಿಬ್ಬರು ಕುಷ್ಟಗಿ ತಾಲೂಕಿನ ಹನುಮನಾಳಕ್ಕೆ ಬಂದು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು ಸ್ವಯಂ ನಿರ್ಬಂಧ ಹಾಕಿಕೊಳ್ಳುವುದಾಗಿ ವಾಗ್ದಾನ ಮಾಡಿದ್ದರು. ನಿತ್ಯ ಬೆಳಗ್ಗೆ 9ರವರೆಗೆ ಅಗತ್ಯ ವಸ್ತುಗಳ ಅಂಗಡಿಗಳ ವ್ಯಾಪಾರ ವಹಿವಾಟಿಗೆ ಕಾಲಾವಕಾಶದ ನಂತರ ಔಷಧ, ಕ್ಲಿನಿಕ್ ಹೊರತು ಪಡಿಸಿ ಸಂಪೂರ್ಣ ಬಂದ್​ಗೆ ತಹಸೀಲ್ದಾರ್​​ ಸಮ್ಮುಖದಲ್ಲಿ ಸಮ್ಮತಿಸಿದರು.

ಇನ್ನು ಗ್ರಾಮಸ್ಥರು ಮನೆಯಲ್ಲಿರಲು ಸೂಚಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್​​​​ , ಸೋಪು ಬಳಸಿ ಕೈ ತೊಳೆಯುವುದು, ಸಾಮಾಜಿಕ ಅಂತರದ ಮಾಹಿತಿಯನ್ನು ನೀಡಿದರು.

ಸೋಂಕಿತರು ಹನುಮನಾಳಕ್ಕೆ ಬಂದಿದ್ದೇಕೆ?:

ಲಾಕಡೌನ್ ನಡುವೆಯೂ ಕಳೆದ ಏಪ್ರಿಲ್ ತಿಂಗಳ ಎರಡನೇ ವಾರ ಇಲ್ಲವೇ ಮೂರನೇ ವಾರದ ದಿನಗಳ ಅಂತರದಲ್ಲಿ ಒಬ್ಬ ಮದುವೆ ಆಮಂತ್ರಣ ಕೊಡಲು ಬಂದಿದ್ದು, ಇನ್ನೊಬ್ಬ ಔಷಧ ಕೊಳ್ಳಲು ಬಂದಿದ್ದರು. ಅವರು ಬಂದು ಹೋದ ಬಳಿಕ ಕೊರೊನಾ ಸೋಂಕು ಬಾಗಲಕೋಟೆ ಜಿಲ್ಲೆಯ ಆರೋಗ್ಯ ಇಲಾಖೆಯಿಂದ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ರೋಗಿ - 681 ಹಾಗೂ ರೋಗಿ- 684 ಸೋಂಕಿತರ ಸಂಪರ್ಕದ 6 ಜನರನ್ನು ನಿಡಶೇಷಿ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ಇನ್ನು ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ಜಿ. ಪಿಎಸೈ ಅಮರೇಶ ಹುಬ್ಬಳ್ಳಿ, ನಾಡ ತಹಸೀಲ್ದಾರ್​​​​, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಮತ್ತಿತರರಿದ್ದರು

Last Updated : May 9, 2020, 6:36 PM IST

ABOUT THE AUTHOR

...view details