ಕರ್ನಾಟಕ

karnataka

By

Published : Aug 1, 2020, 10:59 AM IST

ETV Bharat / state

ಸೋಂಕಿತರ ಹೋಮ್ ಐಸೋಲೇಷನ್​ಗೆ ಆದ್ಯತೆ: ತಹಶೀಲ್ದಾರ

ಒಂದೇ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಕೊರೊನಾ ದೃಢವಾದರೆ ಅಂತಹವರನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗುವುದು ಎಂದು ತಹಶೀಲ್ದಾರ ಎಂ.ಸಿದ್ದೇಶ ತಿಳಿಸಿದ್ದಾರೆ.

Tahsildar M. Siddesha
ಹೋಮ್ ಐಸೋಲೇಷನ್​ಗೆ ಆದ್ಯತೆ:ತಹಶೀಲ್ದಾರ ಎಂ.ಸಿದ್ದೇಶ

ಕುಷ್ಟಗಿ: ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಮ್ಐಸೋಲೇಷನ್​ಗೆ ಸೂಕ್ತವಾಗಿದ್ದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗುವುದು ತಹಶೀಲ್ದಾರ ಎಂ.ಸಿದ್ದೇಶ ಹೇಳಿದರು.

ಹೋಮ್ ಐಸೋಲೇಷನ್​ಗೆ ಆದ್ಯತೆ: ತಹಶೀಲ್ದಾರ ಎಂ.ಸಿದ್ದೇಶ

ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಸೋಂಕಿತರು ಹೋಮ್ ಐಸೋಲೇಷನ್ ಇಚ್ಛಿಸಿದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಅನ್ವಯ ತಾವು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಹೋಮ್ ಐಸೋಲೇಶನ್​ಗೆ ಸೂಕ್ತವೇ? ಎನ್ನುವುದನ್ನು ಗಮನಿಸಿ ಪ್ರತ್ಯೇಕ ಶೌಚಾಲಯ, ಸ್ನಾನ ಗೃಹ, ಅಡುಗೆ ಕೋಣೆ ಹಾಗೂ ಬೆಡ ರೂಮ್ ಸೂಕ್ತ ವ್ಯವಸ್ಥೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಕೊರೊನಾ ದೃಢವಾದರೆ ಅಂತಹವರನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗುವುದು. ಈಗಾಗಲೇ ಕುಷ್ಟಗಿ ತಾಲೂಕಿನ 5 ಜನರನ್ನು ಹೋಮ್ ಐಸೋಲೇಷನ್​ನಲ್ಲಿ​ ಇಡಲಾಗಿದೆ.

ತಾಲೂಕಿನಲ್ಲಿ ದಿನೇ ದಿನೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರದ ಮುಂಜಾಗ್ರತೆ ಅಗತ್ಯವಾಗಿರುತ್ತದೆ. ಸೋಂಕು ಬಾರದಂತೆ ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

ABOUT THE AUTHOR

...view details