ಕೊಪ್ಪಳ:ಕೊಪ್ಪಳ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯ ಪರಶುರಾಮ್ ಮೇದಾರ ಬಿಜೆಪಿ ಸೇರ್ಪಡೆಯಾದರು. ಆದರೆ ಈ ವೇಳೆ ಸರ್ಕಾರಿ ನೌಕರರೊಬ್ಬರು ಪ್ರತ್ಯಕ್ಷರಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಸೇರ್ಪಡೆ ವೇಳೆ ಸರ್ಕಾರಿ ನೌಕರ ಪ್ರತ್ಯಕ್ಷ
ಕೊಪ್ಪಳ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಪಕ್ಷೇತರ ಸದಸ್ಯ ಪರಶುರಾಮ್ ಮೇದಾರ ಕಮಲ ಮುಡಿದಿದ್ದಾರೆ.
ಪರಶುರಾಮ್ ಮೇದಾರ ಬಿಜೆಪಿ ಸೇರ್ಪಡೆ
ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಹಿನ್ನೆಲೆಯಲ್ಲಿ ಪಕ್ಷೇತರ ಸದಸ್ಯ ಪರಶುರಾಮ್ ಮೇದಾರ ಬಿಜೆಪಿ ಮುಖಂಡ ಅಮರೇಶ ಕರಡಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಇದೇ ಮೊದಲ ಬಾರಿಗೆ ನಗರಸಭೆಗೆ ಸದಸ್ಯನಾಗಿ ಆಯ್ಕೆಯಾಗಿರುವ ಪರಶುರಾಮಗೆ ಪ್ರಕಟವಾಗಿರುವ ಮೀಸಲಾತಿಯಿಂದ ಅಧ್ಯಕ್ಷ ಸ್ಥಾನ ಒಲಿಯಲಿದೆ.
ಇನ್ನು ಪರಶುರಾಮ್ ಮೇದಾರ ಬಿಜೆಪಿ ಸೇರ್ಪಡೆ ವೇಳೆ ಸರ್ಕಾರಿ ನೌಕರ ಪ್ರತ್ಯಕ್ಷನಾಗಿದ್ದು ಚರ್ಚೆಗೆ ಗ್ರಾಸವಾಗಿದೆ.