ಕರ್ನಾಟಕ

karnataka

By

Published : Mar 30, 2020, 9:07 PM IST

ETV Bharat / state

ಲಾಕ್‌ಡೌನ್‌ ಉಲ್ಲಂಘಿಸಿದವರನ್ನು ಎಳೆದೊಯ್ದ 'ಯಮಕಿಂಕರರು'..

ದೇಶದಲ್ಲಿ ಇದೀಗ ಕೊರೊನಾ ಸೋಂಕು ಮೂರನೇ ಹಂತಕ್ಕೆ ಕಾಲಿಟ್ಟಿದೆ. ಸರ್ಕಾರಗಳ ಎಚ್ಚರಿಕೆ ನಡುವೆಯೂ ನಿರಾತಂಕವಾಗಿ ಓಡಾಡುತ್ತಿರುವವರನ್ನು ಈ ಯಮಕಿಂಕರರು ಹಿಡಿದು ಎಚ್ಚರಿಕೆ ನೀಡಿದ್ದಾರೆ.

ಯಮಕಿಂಕರರು
ಯಮಕಿಂಕರರು

ಗಂಗಾವತಿ: ನಿಷೇಧಾಜ್ಞೆ ಉಲ್ಲಂಘಿಸಿ ಹೊರಗೆ ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿರುವವರನ್ನು ಯಮ ಮತ್ತು ಆತನ ಕಿಂಕರರು, ನೇರವಾಗಿ ನರಕಕ್ಕೆ ಕರೆದೊಯ್ದ ಘಟನೆ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ನಡೆಯಿತು.

ಅರೇ ಇದೇನಿದು ಅಂತೀರಾ.. ದೇಶದಲ್ಲಿ ಇದೀಗ ಕೊರೊನಾ ಸೋಂಕು ಮೂರನೇ ಹಂತಕ್ಕೆ ಕಾಲಿಟ್ಟಿದೆ. ಸರ್ಕಾರಗಳ ಎಚ್ಚರಿಕೆ ನಡುವೆಯೂ ನಿರಾತಂಕವಾಗಿ ಓಡಾಡುತ್ತಿರುವವರನ್ನು ಈ ಯಮ ಕಿಂಕರರು ಹಿಡಿದು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಭೀತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ನಗರಸಭೆಯ ಅಧಿಕಾರಿಗಳು ಈ ಅಣುಕು ಪ್ರದರ್ಶನ ಹಮ್ಮಿಕೊಂಡಿದ್ದರು. ಹಗಲು ವೇಷಗಾರರು, ವಾಹನ ಸವಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರು.

ABOUT THE AUTHOR

...view details