ಕರ್ನಾಟಕ

karnataka

ಡಿ.ಕೆ.ಶಿವಕುಮಾರ್‌ಗೆ ಮಾತನಾಡುವುದೇ ಚಟವಾಗಿದೆ: ಆರ್.ಅಶೋಕ್ ತಿರುಗೇಟು

ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತು ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

By

Published : Nov 29, 2020, 12:44 PM IST

Published : Nov 29, 2020, 12:44 PM IST

Updated : Nov 29, 2020, 1:14 PM IST

ಆರ್.ಅಶೋಕ್ ತಿರುಗೇಟು
ಆರ್.ಅಶೋಕ್ ತಿರುಗೇಟು

ಕೊಡಗು/ಪೊನ್ನಂಪೇಟೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಮಾತನಾಡುವುದೇ ಒಂದು ರೀತಿಯ ಚಟವಾಗಿದೆ ಎಂದು ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್

ಪೊನ್ನಂಪೇಟೆ ತಾಲೂಕು ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತು ಆಡಿಯೋ, ವಿಡಿಯೋ ಇವೆ ಎನ್ನುವ ಡಿಕೆಶಿ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಸಂತೋಷ್ ವಿಡಿಯೋ ಡಿಕೆಶಿ ಬಳಿ ಇದ್ದರೆ ಬಿಡುಗಡೆ ಮಾಡಲಿ.. ಸಚಿವ ಕೆ ಎಸ್‌ ಈಶ್ವರಪ್ಪ ಸವಾಲು

ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್​ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಅವರ ಪಕ್ಷದಲ್ಲಿರುವ ರಾಜಕೀಯ ಮುಖಂಡರೆಲ್ಲಾ ಬಿಜೆಪಿಗೆ ಬರುತ್ತಿದ್ದಾರೆ.‌ ಒಂದು ವೇಳೆ ಅದಕ್ಕೆ ಸಂಬಂಧಿಸಿದ ಸಾಕ್ಷಿಗಳಿದ್ದರೆ ಕೊಡುವಂತೆ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಕೇಳಿದ್ದಾರೆ. ಹೀಗಿದ್ದರೂ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದರು.

Last Updated : Nov 29, 2020, 1:14 PM IST

ABOUT THE AUTHOR

...view details