ಕರ್ನಾಟಕ

karnataka

ಮತ್ತೊಂದು ಶಾಕಿಂಗ್​ ನ್ಯೂಸ್​​​.. ಮಂಜಿನ ನಗರಿ ಬೆಟ್ಟಗಳಲ್ಲಿ ಬಿರುಕು: ಸುದೀರ್ಘ ಅಧ್ಯಯನದ ಸಲಹೆ ನೀಡಿದ ವಿಜ್ಞಾನಿಗಳು

ಮಡಿಕೇರಿಯ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬಿರುಕು ಹಾಗೂ ಭೂ ಕುಸಿತದ ಬಗ್ಗೆ ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿಗಳ ತಂಡ ಜಿಲ್ಲಾಡಳಿತಕ್ಕೆ ತಿಳಿಸಿದೆ. ಈ ಕುರಿತು ವಿಜ್ಞಾನಿಗಳಾದ ಕಪಿಲ್ ಮತ್ತು ಬಸು ತಂಡದಿಂದ ವರದಿ ಸಲ್ಲಿಕೆಯಾಗಿದೆ.

By

Published : Sep 9, 2019, 5:31 PM IST

Published : Sep 9, 2019, 5:31 PM IST

Updated : Sep 9, 2019, 7:58 PM IST

ಬೆಟ್ಟಗಳಲ್ಲಿ ಬಿರುಕು

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬಿರುಕು ಹಾಗೂ ಭೂ ಕುಸಿತದ ಬಗ್ಗೆ ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿಗಳ ತಂಡ ಜಿಲ್ಲಾಡಳಿತಕ್ಕೆ ತಿಳಿಸಿದೆ.

ವಿಜ್ಞಾನಿಗಳಾದ ಕಪಿಲ್ ಮತ್ತು ಬಸು ತಂಡದಿಂದ ವರದಿ ಸಲ್ಲಿಕೆಯಾಗಿದ್ದು, ವಿರಾಜಪೇಟೆ ತಾಲೂಕಿನ ತೋರಾ, ಅಯ್ಯಪ್ಪ, ಭಾಗಮಂಡಲ‌ ಹಾಗೂ ಬ್ರಹ್ಮಗಿರಿ ಬೆಟ್ಟಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುದೀರ್ಘ ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಬೆಟ್ಟ ಕುಸಿದ ಪ್ರಕರಣಕ್ಕೂ ಕಾರಣ ತಿಳಿಯಲು ಸಂಶೋಧನೆ ಅಗತ್ಯವಿದೆ.‌ ತೋರಾ ಪ್ರಕರಣ ಸಂಶೋಧನೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಭಾಗಮಂಡಲ ಬಳಿಯ ಬೆಟ್ಟದಲ್ಲಿ ಬಿರುಕು ಕಾಣಿಕೊಂಡಿರುವುದರಿಂದ ಭಾಗಮಂಡಲ ಬೆಟ್ಟ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಬಾರದು. ಅಲ್ಲಿ ಎಲ್ಲ ರೀತಿಯ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಯಬಹುದು. ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಮುಂದಿನ‌ ದಿನಗಳಲ್ಲಿ ಅಪಾಯ ಉಂಟಾಗಬಹುದು ಎಂದು ಮುನ್ಸೂಚನೆ ನೀಡಿದೆ.

ಮಂಜಿನ ನಗರಿ ಬೆಟ್ಟಗಳಲ್ಲಿ ಬಿರುಕು

ಬೆಟ್ಟದ ಕೆಳಭಾಗದಲ್ಲಿ ಜನವಸತಿ ಪ್ರದೇಶ ತೆರವು ಮಾಡಬೇಕು. ಬೆಟ್ಟದ ಬಿರುಕು ಸರಿಪಡಿಸಲು ಶಾಶ್ವತ ತಂತ್ರಜ್ಞಾನ ಬಳಸಬೇಕು. ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಬಿರುಕು ಹೆಚ್ಚಾಗದಂತೆ ತಡೆಯುವುದು ಮುಖ್ಯ. ಬಿರುಕು ತಡೆಯಲು ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು. ಒಟ್ಟಾರೆ ಕೊಡಗಿನ ಬೆಟ್ಟಗಳ ಬಿರುಕು ಬಹಳ ಆತಂಕಕಾರಿ ಅದನ್ನು ತಡೆಯಲು ಸುದೀರ್ಘ ಸಂಶೋಧನೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಮುಂದಿನ‌ ದಿನಗಳಲ್ಲಿ ಅಪಾಯ ಉಂಟಾಗಬಹುದು ಎಂದು ಮುನ್ಸೂಚನೆ ನೀಡಿದೆ. ಬೆಟ್ಟದ ಕೆಳಭಾಗದಲ್ಲಿ ಜನವಸತಿ ಪ್ರದೇಶ ತೆರವು ಮಾಡಬೇಕು. ಬೆಟ್ಟದ ಬಿರುಕು ಸರಿಪಡಿಸಲು ಶಾಶ್ವತ ತಂತ್ರಜ್ಞಾನ ಬಳಸಬೇಕು. ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಬಿರುಕು ಹೆಚ್ಚಾಗದಂತೆ ತಡೆಯುವುದು ಮುಖ್ಯ. ಬಿರುಕು ತಡೆಯಲು ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು. ಒಟ್ಟಾರೆ ಕೊಡಗಿನ ಬೆಟ್ಟಗಳ ಬಿರುಕು ಬಹಳ ಆತಂಕಕಾರಿ ಅದನ್ನು ತಡೆಯಲು ಸುದೀರ್ಘ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Last Updated : Sep 9, 2019, 7:58 PM IST

ABOUT THE AUTHOR

...view details