ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ತೀವ್ರಗೊಂಡ ಬೇಸಿಗೆ... ಕುಡಿವ ನೀರಿಗಾಗಿ ತಾಂಡಾಗಳಲ್ಲಿ ಪರದಾಟ!

19 ಕೋಟಿ ವ್ಯಯಿಸಿ ಪೈಫ್​ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂ. ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

By

Published : May 8, 2019, 3:47 PM IST

ಕುಡಿಯುವ ನೀರಿಗಾಗಿ ತಾಂಡಗಳಲ್ಲಿ ಪರದಾಟ

ಕಲಬುರಗಿ:ಜಿಲ್ಲೆಯಲ್ಲಿ ಬೇಸಿಗೆ ತೀವ್ರಗೊಳ್ಳುತ್ತಿದ್ದಂತೆಯೇ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲೂ ಉಪ ಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿವ ನೀರಿಗಾಗಿ ಪರದಾಡುವಂತಾಗಿದೆ.

ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು, ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲಿಯೂ ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೆ ನೀರಿಗಾಗಿ ಪರದಾಟ ಹೆಚ್ಚಾಗಲು ಆರಂಭಿಸಿದೆ. ಉಪಚುನಾವಣೆ ನಡೆಯುತ್ತಿರುವ ಚಿಂಚೋಳಿ ಕ್ಷೇತ್ರದಲ್ಲಿ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅದರಲ್ಲಿಯೂ ತಾಂಡಾಗಳಲ್ಲಿ ಕಿಲೋಮೀಟರ್ ಗಟ್ಟಲೆ ಸಾಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ.

ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ. ಊಟ, ನಿದ್ರೆ ಬಿಟ್ಟು ನೀರಿನ ಹಿಂದೆ ಬೀಳುವಂತಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ರುಮ್ಮನಗುಡಾ ತಾಂಡಾ ಮತ್ತು ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆ ಮಾಡಲೆಂದು 19 ಕೋಟಿಯ ಯೋಜನೆ ರೂಪಿಸಲಾಗಿತ್ತು. 19 ಕೋಟಿ ವ್ಯಯಿಸಿ ಪೈಪ್ ಲೈನ್ ಹಾಕಿ, ಚನ್ನೂರು ಕೆರೆಯಿಂದ ನೀರು ತರಬೇಕೆಂದು ಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೋಟ್ಯಂತರ ರೂ. ಯೋಜನೆ ಹಳ್ಳ ಹಿಡಿದಿದ್ದು, ಜನ ಮಾತ್ರ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕುಡಿಯುವ ನೀರಿಗಾಗಿ ತಾಂಡಗಳಲ್ಲಿ ಪರದಾಟ

ಚಿಂಚೋಳಿ ತಾಲೂಕಿನ ಬಹುತೇಕ ಜನ ಗುಳೆ ಹೋಗಿದ್ದಾರೆ. ಮನೆಗಳಲ್ಲಿ ಇರೊದು ಹೆಚ್ಚಾಗಿ ಮಕ್ಕಳು, ವಯೋವೃದ್ಧರು. ಕುಡಿಯುವ ನೀರಿನ ಸಮಸ್ಯೆ, ಕೂಲಿಯ ಕೊರತೆ ಇತ್ಯಾದಿಗಳಿಂದಾಗಿ ಬಹುತೇಕರು ಊರು ಬಿಟ್ಟಿದ್ದು, ಉಳಿದವರು ಮಾತ್ರ ನಿತ್ಯ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಉಪ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆ ಬಗೆಹರಿಸುವವರೆಗೆ ಮತದಾನಕ್ಕೆ ಅವಕಾಶ ನೀಡಲ್ಲ. ಚುನಾವಣಾ ಅಧಿಕಾರಿಗಳು ತಾಂಡಾ ಪ್ರವೇಶಿಸಲು ಪ್ರಯತ್ನಿಸಿದರೆ ಮತಯಂತ್ರಗಳನ್ನೇ ಹೊಡೆದು ಹಾಕುವುದಾಗಿ ತಾಂಡಾ ನಿವಾಸಿಗಳು ಎಚ್ಚರಿಕೆ ನೀಡುತ್ತಿದ್ದಾರೆ.

ಅಧಿಕಾರಿಗಳು,ರಾಜಕಾರಣಿಗಳು ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪ ಚುನಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ತಾಂಡ ಮತ್ತು ಹಳ್ಳಿ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜನತೆ ಉಪ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡುತ್ತಿದ್ದಾರೆ.

ABOUT THE AUTHOR

...view details