ಕರ್ನಾಟಕ

karnataka

By

Published : Feb 7, 2020, 3:18 PM IST

ETV Bharat / state

ಕುಮಾರಸ್ವಾಮಿ ಅವರದ್ದು ಮುಗಿದ ಅಧ್ಯಾಯ: ಆರ್. ಅಶೋಕ್ ವ್ಯಂಗ್ಯ

ಕುಮಾರಸ್ವಾಮಿ ಅವರದ್ದು ಮುಗಿದ ಅಧ್ಯಾಯ, ಏನೇ ಮಾತನಾಡಿದರು ಅವರ ಮಾತಿಗೆ ಬೆಲೆ ಇರಲ್ಲ. ಜೆಡಿಎಸ್ ಪಕ್ಷ ಈಗಾಗಲೇ ರಾಜ್ಯದಲ್ಲಿ ಕ್ಷೀಣಿಸುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

R. Ashok
ಆರ್.ಅಶೋಕ್

ಹಾಸನ: ಕುಮಾರಸ್ವಾಮಿ ಅವರದ್ದು ಮುಗಿದ ಅಧ್ಯಾಯ, ಏನೇ ಮಾತನಾಡಿದರೂ ಅವರ ಮಾತಿಗೆ ಬೆಲೆ ಇರಲ್ಲ. ರಾಜ್ಯದಲ್ಲಿ ಈಗಾಗಲೇ ಜೆಡಿಎಸ್ ಪಕ್ಷ ಕ್ಷೀಣಿಸುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಹೆಚ್​ಡಿಕೆ ಕುರಿತು ಸಚಿವ ಆರ್.ಅಶೋಕ್ ವ್ಯಂಗ್ಯ

ನಗರದ ಹೊರವಲಯದಲ್ಲಿರುವ ದೇವರಾಯಪಟ್ಟಣದ ಆಂಜನೇಯ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಈಗ ಮಾತನಾಡಿದರೆ ಅದಕ್ಕೆ ಬೆಲೆ ಇಲ್ಲ, ಮುಂದಿನ ದಿನಗಳಲ್ಲಿ ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಮತ್ತೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್​, ಅಖಂಡ ಕರ್ನಾಟಕವಲ್ಲ, ಅಖಂಡ ಭಾರತಕ್ಕೆ ಉಮೇಶ್ ಕತ್ತಿಯವರು ಮುಖ್ಯಮಂತ್ರಿಯಾಗಲಿ, ನನ್ನದು ಅಭ್ಯಂತರವಿಲ್ಲ. ಜೊತೆಗೆ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details