ಗದಗ: ಬಂಧಿಸಲು ಹೋದ ಪೊಲೀಸರನ್ನು ಹೊಲದಲ್ಲಿ ಸುತ್ತಾಡಿಸಿ ಬಳಿಕ ಬೈಕ್ಗೆ ಬೆಂಕಿ ಹಚ್ಚಿ ಖದೀಮನೊಬ್ಬ ಎಸ್ಕೇಪ್ ಆದ ಪ್ರಕರಣ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ಬಂಧಿಸಲು ಹೋದ ಪೊಲೀಸರ ಬೈಕ್ಗೆ ಬೆಂಕಿ ಹಚ್ಚಿ ಎಸ್ಕೇಪ್ ಆದ ಐನಾತಿ ಖದೀಮ..!
ಬಂಧಿಸಲು ಹೋದ ಪೊಲೀಸರ ಬೈಕ್ಗೆ ಬೆಂಕಿ ಹಚ್ಚಿ ಖದೀಮನೊಬ್ಬ ಪರಾರಿಯಾದ ಘಟನೆ ಗದಗದ ನಾರಾಯಣಪುರದಲ್ಲಿ ನಡೆದಿದೆ.
ಸಂತೋಷ್ ರುದ್ರಯ್ಯ ಹಿರೇಮಠ ಪೊಲೀಸರಿಂದ ತಪ್ಪಿಸಿಕೊಂಡಿರುವ ಐನಾತಿ ಖದೀಮ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲು, ಗದಗ ಶಹರ್ ಠಾಣೆಯ ಇಬ್ಬರು ಪೊಲೀಸರು ನಾರಾಯಣಪುರಕ್ಕೆ ತೆರಳಿದ್ದರು. ಪೊಲೀಸರನ್ನು ನೋಡಿದ ಖದೀಮ ಸಂತೋಷ್, ಹೊಲದಲ್ಲಿ ಓಡತೊಡಗಿದ್ದಾನೆ. ತುಂಬಾ ಹೊತ್ತು ಪೊಲೀಸರನ್ನು ಹೊಲದಲ್ಲಿ ಓಡಿಸಿದ ಆರೋಪಿ, ಬಳಿಕ ರಸ್ತೆ ಬದಿ ನಿಲ್ಲಿಸಿದ್ದ ಪೊಲೀಸರ ಬೈಕ್ಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿ ಆಗಿದ್ದಾನೆ.
ಪೊಲೀಸರ ಎರಡು ಬೈಕ್ಗಳು ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್ಐ ಎಂ.ಜಿ. ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
TAGGED:
thief Escaped in Gadag