ಕರ್ನಾಟಕ

karnataka

By

Published : Feb 18, 2020, 6:46 PM IST

ETV Bharat / state

ಗ್ಯಾಸ್ ಬೆಲೆ ಏರಿಕೆಗೆ ಖಂಡನೆ: ದರ ಕಡಿಮೆ ಮಾಡಲು ಆಗ್ರಹಿಸಿ ಪ್ರತಿಭಟನೆ

ಗ್ಯಾಸ್ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್.ಯು‌.ಸಿ.ಐ ಸಂಘಟನೆ ವತಿಯಿಂದ ಪ್ರತಿಭಟನಾ ‌ಮೆರವಣಿಗೆ ನಡೆಸಲಾಯಿತು.

Protest by the SUCI Organization in Dharwad
ಧಾರವಾಡದಲ್ಲಿ ಎಸ್.ಯು‌.ಸಿ.ಐ ಸಂಘಟನೆ ವತಿಯಿಂದ ಪ್ರತಿಭಟನಾ ‌ಮೆರವಣಿಗೆ

ಧಾರವಾಡ: ಗ್ಯಾಸ್ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್.ಯು‌.ಸಿ.ಐ ಸಂಘಟನೆ ವತಿಯಿಂದ ಪ್ರತಿಭಟನಾ ‌ಮೆರವಣಿಗೆ ನಡೆಸಲಾಯಿತು. ನಗರದ ಕಲಾ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ದೀಪಾ ಚೋಳನ್​ ಅವರಿಗೆ ಮನವಿ ಸಲ್ಲಿಸಲಾಯಿತು.

ಬಾಕಿ‌ ಇರುವ ವೃದ್ಧಾಪ್ಯ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ರೇಷನ್​​ ಕಡಿತದ ಪ್ರಸ್ತಾಪ ಕೈ ಬೀಡಬೇಕು. ಪರಿಹಾರದ ಹಣವನ್ನು ಬಿಡುಗಡೆಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಧಾರವಾಡದಲ್ಲಿ ಎಸ್.ಯು‌.ಸಿ.ಐ ಸಂಘಟನೆ ವತಿಯಿಂದ ಪ್ರತಿಭಟನಾ ‌ಮೆರವಣಿಗೆ

ಕೇಂದ್ರ ಸರ್ಕಾರ ಜನ ವಿರೋಧಿ‌ ನೀತಿ ಅನುಸರಿಸುತ್ತಿದೆ. ಗ್ಯಾಸ್ ದರ ಕಡಿಮೆ ಮಾಡಬೇಕು. ಗ್ಯಾಸ್ ಸಬ್ಸಿಡಿ ನಿಯಮಿತವಾಗಿ ಬ್ಯಾಂಕ್​​​ಗೆ ಜಮಾ ಮಾಡಬೇಕು. ಹಾಲಿನ‌ ದರ ಕಡಿಮೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

For All Latest Updates

TAGGED:

ABOUT THE AUTHOR

...view details