ಕರ್ನಾಟಕ

karnataka

By

Published : May 26, 2022, 12:30 PM IST

ETV Bharat / state

ಧಾರವಾಡ: ಕ್ರೂಸರ್ ವಾಹನ ಅಪಘಾತದಲ್ಲಿ ಗಾಯಗೊಂಡ ಬಾಲಕಿ ಸಾವು

ಮೇ 20ರಂದು ಧಾರವಾಡದ ಬಾಡ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು.

dharwad-cruiser-accident-11-people-died
ಕ್ರೂಸರ್ ವಾಹನ ಅಪಘಾತ ಪ್ರಕರಣ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಧಾರವಾಡ: ತಾಲೂಕಿನ ಬಾಡ ಬಳಿ ಇತ್ತೀಚೆಗೆ ನಡೆದ ಕ್ರೂಸರ್ ವಾಹನ ಅಪಘಾತ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಮೂಲಕ ಸಾವಿನ ಸಂಖ್ಯೆ 11ಕ್ಕೇರಿದೆ. ಐದು ವರ್ಷದ ಆರಾಧ್ಯ ಹುತಮಲ್ಲನ್ನವರ ಮೃತಪಟ್ಟ ಬಾಲಕಿ. ಕಳೆದ 6 ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಮೇ 20ರಂದು ಬಾಡ ಬಳಿ ನಡೆದ ಭೀಕರ ಅಪಘಾತದಲ್ಲಿ 9 ಜನ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಸ್ ಬರುವಾಗ ಚಾಲಕನ ಅಜಾರೂಗಕತೆಯಿಂದ ವಾಹನ ಮರಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ, ಸ್ಥಳದಲ್ಲೇ ಏಳು ಜ‌ನ‌ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಇದನ್ನೂ ಓದಿ:ಕ್ರೂಸರ್ ವಾಹನ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 10ಕ್ಕೆ ಏರಿಕೆ

ABOUT THE AUTHOR

...view details