ಕರ್ನಾಟಕ

karnataka

By

Published : Feb 4, 2020, 1:13 PM IST

ETV Bharat / state

ಅಂತರ್ ​​​ರಾಜ್ಯ ಕಳ್ಳನ ಬಂಧನ: 26.13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಅಂತರ್​​​ ರಾಜ್ಯ ಕಳ್ಳನನ್ನು ಗೋಕುಲ ರಸ್ತೆಯ ಪೊಲೀಸರು ಬಂಧಿಸಿದ್ದಾರೆ. ಕಳ್ಳನಿಂದ 26.13 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Cops arrested interstate thieves
ಅಂತರ್​​​ರಾಜ್ಯ ಕಳ್ಳನನ್ನು ಬಂಧಿಸಿದ ಪೊಲೀಸರು

ಹುಬ್ಬಳ್ಳಿ:ನಗರದ ವಿವಿಧ ಪ್ರದೇಶಗಳಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಅಂತರ್ ​​​ರಾಜ್ಯ ಕಳ್ಳನನ್ನು ಗೋಕುಲ ರಸ್ತೆಯ ಪೊಲೀಸರು ಬಂಧಿಸಿದ್ದಾರೆ.

ಕಳ್ಳನಿಂದ 26.13 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತೆಲಂಗಾಣದ ರಾವುಲಪಲೆಂನ ವೆಂಕಟೇಶ್ವರ ರೆಡ್ಡಿ ಬಂಧಿತ ಆರೋಪಿ. ಮತ್ತೊಬ್ಬನ ಸಹಾಯದಿಂದ 2019ರಲ್ಲಿ ಗೋಕುಲ ರಸ್ತೆಯ ಲಕ್ಷ್ಮಿನಗರ, ಅವಿನ್ಯೂ ನಗರ, ಶ್ರೇಯಾನಗರ ಮತ್ತು ವಿನಾಯಕ ನಗರದಲ್ಲಿ ಮನೆಗಳ ಬಾಗಿಲು ಮುರಿದು ಆಭರಣಗಳನ್ನು ಕಳುವು ಮಾಡಿದ್ದನಂತೆ.

ಈ ಕುರಿತು ಗೋಕುಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸ್​​ಪೆಕ್ಟರ್​​​ ನಾಗರಾಜ ಕಮ್ಮಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ತೆಲಂಗಾಣದಲ್ಲಿ ಇರುವ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ್ದಾರೆ. ಅಲ್ಲಿಯ ಖಮ್ಮಂ 1ನೇ ನಗರ ಪೊಲೀಸ್ ಠಾಣೆ ಸಿಬ್ಬಂದಿ ಸಹಾಯದಿಂದ ಆರೋಪಿಯನ್ನು ಬಂಧಿಸಿ, 900 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 7 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details