ಕರ್ನಾಟಕ

karnataka

By

Published : Aug 1, 2020, 2:06 PM IST

ETV Bharat / state

ಪರಸ್ಪರ ಅಪ್ಪಿಕೊಳ್ಳದೇ ಬಕ್ರೀದ್ ಶುಭಾಶಯ ತಿಳಿಸಿದ ಮುಸ್ಲಿಂ ಬಾಂಧವರು

ಸಾಮೂಹಿಕ ಪ್ರಾರ್ಥನೆ ಮತ್ತು ಆ ನಂತರ ಭಾಂದವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆಯನ್ನು ಕೈಬಿಟ್ಟು, ಇದೇ ಮೊದಲ ಬಾರಿಗೆ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ತಿಳಿಸಿರುವುದಾಗಿ ಮುಸ್ಲಿಂ ಮುಖಂಡರು ತಿಳಿಸಿದ್ದಾರೆ

Bakrid Festival
ಪರಸ್ಪರ ಅಪ್ಪಿಕೊಳ್ಳದೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ ಮುಸ್ಲಿಂ ಬಾಂಧವರು..

ಹುಬ್ಬಳ್ಳಿ: ಬಕ್ರೀದ್ ನಿಮಿತ್ತ ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಈದ್ ನಮಾಜ್​ ಮಾಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಿದರು.

ಪರಸ್ಪರ ಅಪ್ಪಿಕೊಳ್ಳದೇ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ ಮುಸ್ಲಿಂ ಬಾಂಧವರು..

ತ್ಯಾಗ ಮತ್ತು ಬಲಿದಾನದ ಸಂಕೇತವೇ ಈ ಬಕ್ರೀದ್ ಹಬ್ಬವಾಗಿದ್ದು, ವಿಶ್ವದಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಕೋವಿಡ್ ನಿಯಮ ಪಾಲಿಸಿ ಹಬ್ಬ ಆಚರಣೆ ಮಾಡಿದ್ದೇವೆ. ಕೊರೊನಾ ಹಿನ್ನೆಲೆ ಈ ವರ್ಷ ಹಬ್ಬವನ್ನು ಸರಳ ಮತ್ತು ಶಾಂತ ರೀತಿಯಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮಾರ್ಗ ಸೂಚಿಯಂತೆ ಆಚರಣೆ ಮಾಡಲಾಯಿತು ಎಂದು ಮುಸ್ಲಿಂ ಮುಖಂಡರು ತಿಳಿಸಿದರು.

ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಆನಂತರ ಬಾಂಧವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆಯನ್ನು ಕೈಬಿಟ್ಟು, ಇದೇ ಮೊದಲ ಬಾರಿಗೆ ಪರಸ್ಪರ ಅಪ್ಪಿಕೊಳ್ಳದೇ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ತಿಳಿಸಿರುವುದಾಗಿ ಅವರು ತಿಳಿಸಿದರು.

ABOUT THE AUTHOR

...view details