ಕರ್ನಾಟಕ

karnataka

By

Published : Nov 11, 2019, 5:41 PM IST

ETV Bharat / state

ಹುಬ್ಬಳ್ಳಿಯಲ್ಲಿ ಚರ್ಚ್​ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಹೊಡೆದಾಟ

ಚರ್ಚ್​ವೊಂದರ ಸಮಿತಿಯ ಚುನಾವಣೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಚರ್ಚ್​ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಹೊಡೆದಾಟ

ಹುಬ್ಬಳ್ಳಿ:ಚರ್ಚ್​ನ ಚುನಾವಣೆಗೆ ಸಂಬಂಧಿಸಿದಂತೆನಗರದ ಮಂಟೂರ ರಸ್ತೆಯಲ್ಲಿರುವ ಚರ್ಚ್​ವೊಂದರಲ್ಲಿ ಎರಡು ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.

ಚರ್ಚ್​ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಹೊಡೆದಾಟ

ಘಟನೆಯಲ್ಲಿ ಪ್ರ್ಯಾಂಕ್ಲಿನ್ ಮೋಸಿನ್, ವೈ ಪ್ರಶಾಂತ, ಎಮ್ ವಿಕಿ, ಹಾಗೂ ವಿದ್ಯಾರ್ಥಿನಿಯೋರ್ವಳ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ‌ಕಿಮ್ಸ್​ಗೆ ದಾಖಲು ಮಾಡಲಾಗಿದೆ‌. ಮಾಜಿ ಕಾರ್ಪೊರೇಟರ್ ಬರ್ನಾಬಸ್ ಕೂಡಲ್ ಹಾಗೂ ಆತನ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.

ಆರೋಪಿಗಳು

ಚರ್ಚ್​ನಲ್ಲಿ‌ ನಡೆಯುತ್ತಿದ್ದ ಅವ್ಯವಹಾರಗಳನ್ನು ಪ್ರಶ್ನಿಸಿದ್ದೇ ಹಲ್ಲೆಗೆ ಕಾರಣ. ಕೂಡಲೇ ಹಲ್ಲೆ ಮಾಡಿದವರನ್ನು‌ ಕೂಡಲೇ ಬಂಧಿಸಬೇಕು ಎಂದು ಹಲ್ಲೆಗೊಳಗಾದವರ ಸಂಬಂಧಿಕರು ಒತ್ತಾಯಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು

ABOUT THE AUTHOR

...view details