ದಾವಣಗೆರೆ: ಮೊಬೈಲ್ನಲ್ಲಿ ವಿಡಿಯೋ ಮಾಡಿಟ್ಟು ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಯುವರಾಜ (26) ನೇಣಿಗೆ ಶರಣಾದ ಯುವಕ.
ಮೃತ ಯುವಕ ಸಾವಿಗೂ ಮುನ್ನ ಕಾರಣವನ್ನು ಅವನೇ ಹೇಳಿಕೊಂಡಿದ್ದಾನೆ. ಮೃತ ಯುವರಾಜ್ ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಮಹಿಳೆಯೊಬ್ಬರ ಮನೆಗೆ ಹೋಗಿದ್ದನಂತೆ. ಮಹಿಳೆಯ ಮನೆಗೆ ಹೋದ ವಿಚಾರವಾಗಿ ಗ್ರಾಮದ ಹಾಲಿನ ಡೈರಿ ಸಿದ್ದಪ್ಪ ಮೂಗು ತೂರಿಸಿದ್ದಾನೆ. ಅಲ್ಲಿ ಹೋಗಿ ಗಲಾಟೆ ಮಾಡಿ ಹೊಡೆದಿದ್ದಕ್ಕೆ ಯುವರಾಜ್ ಬೇಸರಗೊಂಡಿದ್ದನಂತೆ. ಈ ವಿಚಾರವಾಗಿ ಮನನೊಂದು ಆತ ನೇಣಿಗೆ ಶರಣಾಗುವ ಮುನ್ನ ನನ್ನ ಆತ್ಮಹತ್ಯೆಗೆ ಡೈರಿ ಸಿದ್ದಪ್ಪ ಕಾರಣ ಎಂದು ಆರೋಪಿಸಿದ್ದಾನೆ.