ಕರ್ನಾಟಕ

karnataka

By

Published : Dec 21, 2022, 6:31 PM IST

Updated : Dec 22, 2022, 2:24 PM IST

ETV Bharat / state

ದಾವಣಗೆರೆ: ಅರಣ್ಯಾಧಿಕಾರಿಗಳಿಂದ ದಿಢೀರ್​ ದಾಳಿ

ಮಾಜಿ ಸಚಿವರೊಬ್ಬರ ಒಡೆತನದ ಮಿಲ್ ಮೇಲೆ ಅರಣ್ಯ ಅಧಿಕಾರಿಗಳ ತಂಡ ದಿಢೀರ್​ ದಾಳಿ ನಡೆಸಿದೆ. ದಾಳಿ ವೇಳೆ ಕೆಲವು ಕಾಡು ಪ್ರಾಣಿಗಳು ಪತ್ತೆ ಆಗಿರುವ ವರದಿಯಾಗಿದೆ.

ಅರಣ್ಯಾಧಿಕಾರಿಗಳಿಂದ ದಿಢೀರ್​ ದಾಳಿ
ಅರಣ್ಯಾಧಿಕಾರಿಗಳಿಂದ ದಿಢೀರ್​ ದಾಳಿ

ದಾವಣಗೆರೆ:ಅಕ್ರಮವಾಗಿ ಕಾಡು ಪ್ರಾಣಿಗಳನ್ನು ಇರಿಸಲಾಗಿದೆ ಎನ್ನುವ ಶಂಕೆಯ ಆಧಾರದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಜಿ ಸಚಿವರೊಬ್ಬರ ಒಡೆತನದ ಮಿಲ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

20ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು ಸತತ ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಮಿಲ್​ನಲ್ಲಿ ಕಾಡು ಪ್ರಾಣಿಗಳನ್ನು ಇರಿಸಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ದಾಳಿ ವೇಳೆ ಸ್ಥಳೀಯ ಕೆಲಸಗಾರರನ್ನು ಸಹ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಧಿಕಾರಿಗಳು ಮಿಲ್​ ಮೇಲೆ ದಾಳಿ ನಡೆಸಿದ್ದಕ್ಕೆ ಕಾರಣ ಮತ್ತು ಮಿಲ್​ನಲ್ಲಿ ಏನು ದೊರೆತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಕೆಲವು ಕಾಡು ಪ್ರಾಣಿಗಳು ಪತ್ತೆ ಆಗಿರುವ ವರದಿಯಾಗಿದೆ.

ಇದನ್ನೂ ಓದಿ:ಅನಧಿಕೃತ ಮತದಾರರ ಗುರುತಿನ ಚೀಟಿ ಮುದ್ರಣ: ಹರಿಹರದಲ್ಲಿ ಝರಾಕ್ಸ್ ಅಂಗಡಿ ಮಾಲೀಕನ ವಿರುದ್ಧ ಕೇಸ್​

Last Updated : Dec 22, 2022, 2:24 PM IST

ABOUT THE AUTHOR

...view details