ದಾವಣಗೆರೆ: ಸಿದ್ದರಾಮಯ್ಯನವರು ಏನಾದ್ರೂ ತೀರ್ಮಾನ ಮಾಡಿ ಎಸ್ಟಿ ಮೀಸಲಾತಿ ಕೊಡಿಸಲಿ. ನಾನು ಬೇಡ ಅನ್ನಲ್ಲ ಅನ್ನೋ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕುರುಬರಿಗೆ ಎಸ್ಟಿ ಮೀಸಲಾತಿ ಸಿಗಬೇಕೆಂದು ಕಾಗಿನೆಲೆ ಶ್ರೀಯವರ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಇಂದು ಹೋರಾಟ ಆರಂಭವಾಗಿದೆ. ಸಭೆ, ಸಮಾರಂಭಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿವೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ಸಿದ್ದರಾಮಯ್ಯನವರು ಎಸ್ಟಿ ಮೀಸಲಾತಿ ಹೋರಾಟದಲ್ಲಿ ಕಾಣುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೆ ಎಸ್ ಈಶ್ವರಪ್ಪ, ಸಿದ್ದರಾಮಯ್ಯನವರನ್ನು ಹೋರಾಟಕ್ಕೆ ಕರೆಯಲಾಗಿದೆ. ಅವರು ಹೋರಾಟಕ್ಕೆ ಬಂದು ಏನಾದ್ರೂ ತೀರ್ಮಾನ ಮಾಡಿ, ಮೀಸಲಾತಿಯನ್ನು ಕುರುಬ ಸಮುದಾಯಕ್ಕೆ ಕೊಡಿಸಲಿ.
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕೊಟ್ರೇ ಬೇಡ ಅಂತಾರಾ.. ನಾವು ಸಮಾಧಾನವಾಗಿ ಹೋರಾಟ ನಡೆಸುತ್ತಿದ್ದೇವೆ. ಅವರು ಅವರ ಪ್ರಯತ್ನ ಮಾಡಲಿ, ನಾವೆಲ್ಲ ಗುರುಗಳ ಜೊತೆ ಹೋರಾಟ ಮಾಡಲು ಹೊರಟಿದ್ದೇವೆ, ಅವರೂ ಬಂದ್ರೇ ಸಂತೋಷ ಎಂದರು.
ಇದನ್ನೂ ಓದಿ:ಸ್ವಾಮಿ 15 ಲಕ್ಷ ಮಾತ್ರ ನನ್ನ ಖಾತೆಗೆ ಹಾಕಿದ್ದು: ನಟಿ ರಾಧಿಕಾ ಕುಮಾರಸ್ವಾಮಿ