ಕರ್ನಾಟಕ

karnataka

ETV Bharat / state

ರೈತರಿಗೆ ₹10.63 ಕೋಟಿ ವಂಚಿಸಿ ಪರಾರಿಯಾಗಿದ್ದ ಖದೀಮ.. ಕೊನೆಗೂ ಹರಿಹರ ಪೊಲೀಸರ ಬಲೆಗೆ ಬಿದ್ದಿದ್ಹೇಗೆ?

ನಂದಕುಮಾರ್​ನಿಂದ ಮೋಸ ಹೋಗಿದ್ದ ಜಿಲ್ಲೆಯ ವಿವಿಧ ಭಾಗದ ರೈತರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಕುರಿತು ಹರಿಹರ ಕೋರ್ಟ್​​ 33 ಬಾರಿ ವಾರೆಂಟ್​​ ಜಾರಿ ಮಾಡಿದ್ದರು ಕೂಡ ಆರೋಪಿ ತಲೆ ಮರೆಸಿಕೊಂಡಿದ್ದ..

By

Published : Aug 17, 2021, 4:17 PM IST

harihara-police-arrested-nandakumar-in-tamilnadu
ಆರೋಪಿ ನಂದಕುಮಾರ್

ದಾವಣಗೆರೆ :ರೈತರಿಗೆ ಕೋಟ್ಯಂತರ ರೂ. ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ. ನಂದಕುಮಾರ್​ (52) ಎಂಬಾತ ಬಂಧಿತ ಆರೋಪಿ.

2008ರಲ್ಲಿಹರಿಹರ ನಗರದೊಳಗೆ ಆರೋಪಿ ನಂದಕುಮಾರ್,ರೈತರಿಂದ10 ಕೋಟಿ 63 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳ ಖರೀದಿಸಿದ್ದ. ರೈತರಿಗೆ ನೀಡಿದ ಚೆಕ್ ಕೂಡ ಬೌನ್ಸ್ ಆಗಿದ್ದವು. ಇದೇ ರೀತಿ ಹೊರ ರಾಜ್ಯದ ರೈತರಿಗೆ ವಂಚಿಸಿ ಆರೋಪಿ ತಲೆ‌ಮರೆಸಿಕೊಂಡಿದ್ದ.

ನಂದಕುಮಾರ್​ನಿಂದ ಮೋಸ ಹೋಗಿದ್ದ ಜಿಲ್ಲೆಯ ವಿವಿಧ ಭಾಗದ ರೈತರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಕುರಿತು ಹರಿಹರ ಕೋರ್ಟ್​​ 33 ಬಾರಿ ವಾರೆಂಟ್​​ ಜಾರಿ ಮಾಡಿದ್ದರು ಕೂಡ ಆರೋಪಿ ತಲೆ ಮರೆಸಿಕೊಂಡಿದ್ದ.

ಆರೋಪಿ ಬಲೆಗೆ ಬೀಳಿಸಲು ಕಾರ್ಯಪ್ರವೃತ್ತವಾದ ಹರಿಹರ ಪೊಲೀಸರು, ತಮಿಳುನಾಡಿನಲ್ಲಿ ನಂದಕುಮಾರ್​​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ್ದ ತಂಡವನ್ನ ಎಸ್ಪಿ ಸಿ ಬಿ ರಿಷ್ಯಂತ್ ರಚಿಸಿದ್ದಲ್ಲದೇ, ಮಾರ್ಗದರ್ಶನ ಮಾಡಿದ್ದರು.

ABOUT THE AUTHOR

...view details