ಕರ್ನಾಟಕ

karnataka

By

Published : Oct 27, 2019, 7:30 PM IST

ETV Bharat / state

ಪಿ.ವಿ ಸಿಂಧು ಪದಕ ಗೆದ್ದ ರೀತಿಯಲ್ಲಿ ಡಿಕೆಶಿನ ವೆಲ್‌ಕಮ್​ ಮಾಡ್ತಿದ್ದಾರೆ: ಈಶ್ವರಪ್ಪ ವ್ಯಂಗ್ಯ

ಡಿಕೆ ಶಿವಕುಮಾರ್ ಜೈಲಿಗೆ ಹೋಗಿದ್ದಕ್ಕೆ ನಮಗೂ ನೋವಿದೆ. ಯಾವ ರಾಜಕಾರಣಿಗೂ ಇಂಥಾ ಪರಿಸ್ಥಿತಿ ಬರಬಾರದು. ಆದರೆ ದಿಗ್ವಿಜಯ ಸಾಧಿಸಿದ ರೀತಿ ಅವರನ್ನು ಸ್ವಾಗತಿಸಿದ್ದು ಸರಿಯಲ್ಲ ಎಂದು ಸಚಿವ ಕೆ.ಎಸ್‌ ಈಶ್ವರಪ್ಪ ವ್ಯಂಗ್ಯವಾಡಿದರು.

ಈಶ್ವರಪ್ಪ

ದಾವಣಗೆರೆ : ಕಾಂಗ್ರೆಸ್‌ ಮುಖಂಡ/ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಜೈಲಿಗೆ ಹೋಗಿದ್ದು ಯಾಕೆ ಅಂತ ಬಹಿರಂಗವಾಗಬೇಕಿತ್ತು. ಆದರೆ ಆ ಕೆಲಸ ಆಗ್ತಿಲ್ಲ. ಕ್ರೀಡೆಯಲ್ಲಿ ಪಿ.ವಿ ಸಿಂಧು ಪದಕ‌ ಗೆದ್ದಾಗ, ಪಾಕ್‌ನಿಂದ ಅಭಿನಂದನ್ ಭಾರತಕ್ಕೆ ಬಂದಾಗ ಸಿಗುವ ಸಂಭ್ರಮದ ರೀತಿ ಡಿಕೆಶಿ ಅವರನ್ನು ಸ್ವಾಗತಿಸಿರುವುದು ಅಚ್ಚರಿ ತಂದಿದೆ ಎಂದು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡುತ್ತಿರುವ ಸಚಿವ ಕೆ.ಎಸ್‌ ಈಶ್ವರಪ್ಪ

ಡಿಕೆಶಿ ಜೈಲಿಗೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಮಗೂ ನೋವಿದೆ. ಯಾವ ರಾಜಕಾರಣಿಗೂ ಈ ಪರಿಸ್ಥಿತಿ ಬರಬಾರದು. ಆದ್ರೆ, ದಿಗ್ವಿಜಯ ಸಾಧಿಸಿದ ರೀತಿ ಅವರನ್ನು ವೆಲ್‌ಕಮ್ ಮಾಡಿದ್ದು ಸರಿಯಲ್ಲ. ತಪ್ಪು ಮಾಡದೆ ಯಾರೂ ಕೂಡಾ ಜೈಲಿಗೆ ಹೋಗೋಕೆ ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ವಿಚಾರಣೆಗೆ ಇಡಿ, ಸಿಬಿಐ ಅಧಿಕಾರಿಗಳು ಕಾಯ್ತಾ ಇದ್ದಾರೆ. ಕಾಂಗ್ರೆಸ್​​​ನಲ್ಲಿ ಎರಡು ಗುಂಪು ನಿರ್ಮಾಣವಾಗಿದೆ. ಡಿಕೆಶಿ ಸ್ವಾಗತಕ್ಕೆ ಹಲವರು ಹೋಗಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸ್ಪೀಕರ್ ಬಗ್ಗೆ ಹುಚ್ಚುಹುಚ್ಚಾಗಿ ಮಾತನಾಡ್ತಾರೆ. ಅವರ ಪದ ಬಳಕೆ ನನಗೆ ಅಚ್ಚರಿ ತಂದಿದೆ. ಇತ್ತ ಕುಮಾರಸ್ವಾಮಿ ನಮ್ಮ ಸರ್ಕಾರದ ಬಗ್ಗೆ ಸಾಫ್ಟ್ ಕಾರ್ನರ್ ಆಗದ್ದಾರೋ, ಹಾರ್ಡ್ ಆಗಿದ್ದಾರೋ ಗೊತ್ತಿಲ್ಲ. ನಾವ್ ಗಟ್ಟಿಯಾಗಿ ಇದ್ದೇವೆ. ಜೆಡಿಎಸ್ ಹಾಗೂ ಕಾಂಗ್ರೆಸ್​​ನವರು ಒಳಗೊಳಗೆ ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದ್ರು.

ABOUT THE AUTHOR

...view details